Wednesday, April 2, 2014

ಸೋನಿಯಾ ಕೋಟೆ ಯಾಕೆ ಭದ್ರವಾಗಿದೆ ಅಂದರೆ....

                    ಲಖ್ನೋದ ನೆತ್ತಿಯ ಮೇಲೆ ಸೂರ್ಯ ಬಿಸಿಲು ಚಿಮುಕಿಸತೊಡಗಿದ್ದ. ಅಲಹಾಬಾದ್ ಹೈವೇ ಸೇರಿಕೊಂಡಿತ್ತು ನಾವು ಪ್ರಯಾಣಿಸುತ್ತಿದ್ದ ಕಾರು. ರಾಯಬರೇಲಿ 83 ಕಿ.ಮೀ ಅನ್ನೋ ಬೋರ್ಡು. "ರಾಯಬರೇಲಿ" - ಅದೊಂದು ಹೆಸರೇ ಸಾಕು, ಮೆದುಳಿನ ಸುಕ್ಕುಗಳಲ್ಲಿ ಕಳೆದುಹೋಗಿದ್ದ ಆ ಕಥೆ ಮತ್ತೆ ಎದ್ದು ಬಂದು ಚಿತ್ರಗಳಾಗಿ ಕದಲುವಂತಾಗಲು...
                    1930ರ ಒಂದು ಮಟಮಟ ಮಧ್ಯಾಹ್ನ ಇಲ್ಲಿಂದ ದೂರದ ಮುಂಬೈನ ಈವಿಂಗ್ ಕ್ರಿಶ್ಚಿಯನ್ ಕಾಲೇಜಿನ ಎದುರಿಗೆ ಯುವ ಕಾಂಗ್ರೆಸ್ನವರು ಬ್ರಿಟಿಷರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಅದರ ಮುಂಚೂಣಿಯಲ್ಲಿದ್ದ ಹೆಣ್ಣುಮಗಳೊಬ್ಬಳು ಬಿಸಿಲು ತಾಳೋದಕ್ಕಾಗದೇ ಬಿದ್ದುಬಿಟ್ಟರು. ಪಕ್ಕದಲ್ಲಿ ನಿಂತು ನೋಡುತ್ತಿದ್ದ ಹದಿನೆಂಟರ ವಯಸ್ಸಿನ ಫಾರ್ಸಿ ಹುಡುಗನೊಬ್ಬ ಓಡಿಬಂದು ತಲೆಗೆ ನೀರುತಟ್ಟಿ ಉಪಚರಿಸಿದ. ಹಾಗೆ ಬಿದ್ದವರು ಪಂಡಿತ್ ಜವಾಹರಲಾಲ್ ನೆಹರೂರ ಧರ್ಮಪತ್ನಿ ಕಮಲಾ ನೆಹರೂ ಆಗಿರದಿದ್ದರೆ - ಓಡಿಬಂದು ಉಪಚರಿಸಿದವನು ಫಿರೋಜ್ ಜಹಾಂಗೀರ್ ಖಾನ್ ಆಗಿರದಿದ್ದರೆ, ರಾಯಬರೇಲಿ ಲೋಕಸಭಾ ಕ್ಷೇತ್ರಕ್ಕೆ ಬಹುಶಃ ಇಂಥದ್ದೊಂದು ಆಕರ್ಷಣೆ ಇರುತ್ತಿರಲಿಲ್ಲ. ನಾವು ಬೆಂಗಳೂರಿನಿಂದ ಇದನ್ನ ಹುಡುಕಿಕೊಂಡು ಇಲ್ಲೀ ತನಕ ಬರುತ್ತಿರಲಿಲ್ಲ..!
ಫಿರೋಜ್ ಜಹಾಂಗೀರ್ ಖಾನ್ - ಕಮಲಾ ನೆಹರೂ

                   ಮಾರನೇ ದಿನ ಕಾಲೇಜು ತೊರೆದ ಫಿರೋಜ್ ಜಹಾಂಗೀರ್ ಖಾನ್ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ. ಕಮಲಾ ನೆಹರೂರ ಆತ್ಮೀಯತೆಯಿಂದ ಆಕೆಯ ಊರು, ಉತ್ತರ ಪ್ರದೇಶದ ಅಲಹಾಬಾದಿಗೆ ಬಂದ. ಅಂತಿಮವಾಗಿ ಶ್ರೀಮತಿ ಕಮಲಾ ನೆಹರೂ ಟಿ.ಬಿಯಿಂದ ಚೇತರಿಸಿಕೊಳ್ಳಲಾಗದೇ ಸ್ವಿಡ್ಜರ್ಲೆಂಡಿನಲ್ಲಿ ಪ್ರಾಣ ಬಿಟ್ಟಾಗ ಫಿರೋಜ್ ಜಹಾಂಗೀರ್ ಖಾನ್ ಶವದ ತಲೆಯ ಬಳಿ ಕುಳಿತು ಬಿಕ್ಕಳಿಸುತ್ತಿದ್ದ. ನಂತರ ಆತನಿಗೂ - ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿಗೂ ಅನುರಕ್ತಿ ಆಯಿತು. ಫಿರೋಜ್ ಜಹಾಂಗೀರ್ ಖಾನ್, ತನ್ನ ಸರ್ ನೇಮ್ಅನ್ನು ಗಾಂಧಿ ಅಂತ ಬದಲಿಸಿಕೊಂಡರು. ಇಂದಿರಾ ಪ್ರಿಯದರ್ಶಿನಿ ನೆಹರೂ, ಫಿರೋಜ್ ಗಾಂಧಿಯ ಕೈ ಹಿಡಿದು ಇಂದಿರಾ ಗಾಂಧಿ ಆದರು. ಉಕ್ಕಿನ ಮಹಿಳೆಗೆ ಗಾಂಧಿ ಅನ್ನೋ ಸರ್ನೇಮು ಕೊಟ್ಟ ಮನುಷ್ಯ ಆತ. ರಾಜೀವ್ ಗಾಂಧಿಗೆ ಅಂಥದ್ದೊಂದು ಸ್ಫುರದ್ರೂಪ - ಸಂಜಯ್ ಗಾಂಧಿಗೆ ಅಷ್ಟೊಂದು ಜೀವನ ಪ್ರೀತಿ ಬಂದದ್ದು ಕೂಡ ತಂದೆಯ ರಕ್ತದಿಂದಲೇ ಏನೋ. ಅಂಥ ಫಿರೋಜ್ ಗಾಂಧಿ ಮೊದಲ ಚುನಾವಣೆಯಲ್ಲಿ ನಿಂತು ಗೆದ್ದ ಕ್ಷೇತ್ರ ಇದು - ರಾಯಬರೇಲಿ..!
ಫಿರೋಜ್ ಗಾಂಧಿ ವೆಡ್ಸ್ ಇಂದಿರಾ ಪ್ರಿಯದರ್ಶಿನಿ
 ಇಂದಿರಾರನ್ನ ಮದುವೆಯಾದ ನಂತರ ಫಿರೋಜ್ ಅಲಹಾಬಾದಿಗೆ ಬಂದು ಮಾವ ನಡೆಸುತ್ತಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಜವಾಬ್ದಾರಿ ವಹಿಸಿಕೊಂಡರು. ಸ್ವಾತಂತ್ರ್ಯ ದೊರೆತು 1951ರಲ್ಲಿ ಮೊದಲ ಚುನಾವಣೆ ನಡೆದಾಗ ರಾಯಬರೇಲಿಯಿಂದ ನಾಮಪತ್ರ ಸಲ್ಲಿಸಿದರು. ಪಂಡಿತಜಿ ಅಳಿಯ ಅಂತ ಜನ ಬೆನ್ನತ್ತಿಕೊಂಡು ಬಂದು ಓಟು ಕೊಟ್ಟರು. ಗೆದ್ದು ಸಂಸತ್ತಿಗೆ ಹೋದ ಫಿರೋಜ್ ಗಾಂಧಿ, ಸಂಸತ್ತಿನ ಅಧಿವೇಶನದಲ್ಲಿ ಮಾವ ಪಂಡಿತ್ ಜವಾಹರಲಾಲ್ ನೆಹರೂ ವಿರುದ್ಧ ಧ್ವನಿ ಎತ್ತಿದ ಮೊಟ್ಟಮೊದಲ ಗಂಡು. ಬಹುಶಃ ಈ ದೇಶದ ಮೊದಲ ಹಗರಣ "ಎಲ್.ಐ.ಸಿ ಷಡ್ಯಂತ್ರ" ಹೊರಹಾಕಿ ಹೆಣ್ಣುಕೊಟ್ಟ ಮಾವನನ್ನೇ ದೊಡ್ಡ ಇರುಸು ಮುರುಸಿಗೆ ಈಡು ಮಾಡಿದ ವ್ಯಕ್ತಿ. ಆ ಮನುಷ್ಯನ ರಾಜಕಾರಣದ ರೀತಿಯೇ ಬೇರೆ ಇತ್ತು - ಅದಕ್ಕೊಂದು ತೂಕ ಇತ್ತು. ಅಂಥ ಫಿರೋಜ್ ಗಾಂಧಿ ತಮ್ಮ ನಲವತ್ತೆಂಟನೇ ವಯಸ್ಸಿನಲ್ಲಿ ಕಣ್ಣುಮುಚ್ಚಿಕೊಂಡರು. ಮುಂದೆ ಇದೇ ರಾಯಬರೇಲಿಯಿಂದ ಇಂದಿರಾ ಗಾಂಧಿ ಗೆಲುವನ್ನು ಅಸಿಂಧುಗೊಳಿಸಿತ್ತು ಅಲಹಾಬಾದ್ ಹೈಕೋರ್ಟ್. ಅದಕ್ಕೇ ಸಿಟ್ಟಿಗೆದ್ದ ಇಂದಿರಮ್ಮ ತುರ್ತು ಪರಿಸ್ಥಿತಿ ಹೇರಿದ್ದು. ನಂತರ ನಡೆದ ಚುನಾವಣೆಯಲ್ಲಿ ಇದೇ ರಾಯಬರೇಲಿ ಜನ ಇಂದಿರಾಗಾಂಧಿಯವರನ್ನ ಹೀನಾಯವಾಗಿ ಸೋಲಿಸಿದ್ದರು..! ಸಧ್ಯಕ್ಕೆ ಇಂದಿರಾ ಸೊಸೆ ಸೋನಿಯಾ ಗಾಂಧಿಯವರ ಭದ್ರ ಕೋಟೆ. ನಾಲ್ಕು ಸಲ ಭಾರಿ ಬಹುಮತದಿಂದ ಗೆದ್ದಿದ್ದಾರೆ - ಐದನೇ ಸಲ ನಿಂತಿದ್ದಾರೆ.
                   ದಾರಿಯುದ್ದಕ್ಕೂ ಸಮೃದ್ಧ ಗೋಧಿ ಬೆಳೆ. ಕಟಾವಿಗೆ ಬಂದಿದೆ. ಇಲ್ಲಿ ಮಣ್ಣು ಬಿಳಿ. ಬೂದಿಯಷ್ಟು ಬಿಳಿ. ಅಷ್ಟೇ ನುಣುಪು. ಬಹುಶಃ ನಮ್ಮ ಕಡೆಯ ರೈತರು ಇದಕ್ಕೆ ಫಲವತ್ತತೆ ಇದೆ ಅಂತ ಒಪ್ಪೋದೇ ಇಲ್ಲವೇನೋ. ಅಲ್ಲಲ್ಲಿ ಮಿಲ್ಗಳು - ಕಾರ್ಖಾನೆಗಳು. ಇಲ್ಲಿನ ಇಟ್ಟಿಗೆ ಭಟ್ಟಿಗಳು ನಮ್ಮ ಕಡೆಯಂತಿಲ್ಲ. ಹೊಗೆ ಹೋಗಲು ಮುಗಿಲೆತ್ತರದ ಚಿಮಣಿಗಳಿವೆ ಈ ಕಡೆ. ರಾಯಬರೇಲಿ ಹತ್ತಿರಕ್ಕೆ ಬರ್ತಿದ್ದಂತೆ ಶಾಲೆ - ಕಾಲೇಜುಗಳ ಸಂಖ್ಯೆ ಹೆಚ್ಚಾಗ್ತಾ ಹೋಗ್ತವೆ. ಇನ್ನೂ ಹತ್ತಿರ ಬರ್ತಿದ್ದಂತೆ ವಾಹನಗಳ ಶೋ ರೂಮುಗಳು. ರಾಯಬರೇಲಿ ಒಂದು ಜಿಲ್ಲಾ ಕೇಂದ್ರ. ಮೂರು ವರ್ಷಗಳ ಹಿಂದಿನ ಜನಗಣತಿಯಲ್ಲಿ ಮೂವತ್ತನಾಲ್ಕು ಲಕ್ಷ ಜನಸಂಖ್ಯೆ ಇತ್ತು.
                   ನಗರಕ್ಕೆ ಹತ್ತಿರದಲ್ಲೇ ರಸ್ತೆ ಪಕ್ಕದಲ್ಲಿ ಒಂದು ರೈತ ಕುಟುಂಬ ಟೊಮ್ಯಾಟೋ ಬೆಳೆಯಲ್ಲಿ ಕಳೆ ತೆಗೆಯುತ್ತಿತ್ತು. ಮಾತಾಡಿಸಿದರಾಯಿತು ಅಂತ ಹೋದೆವು. ಕಾರಿಳಿದು - ಕೈಯಲ್ಲಿ ಕ್ಯಾಮರಾ ಹಿಡಕೊಂಡು ಬಂದ ನಮ್ಮನ್ನ ನೋಡಿ ಅವರೆಲ್ಲ ಗಾಬರಿಯಾಗಿದ್ದರು. ಮಳೆ - ಬೆಳೆ, ಬೆಲೆಗಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡಿ ನಂತರ ರಾಜಕೀಯದ ಸುದ್ದಿ ಎತ್ತಿದ್ದು. "ಯಾರಿಗೆ ಈ ಸಲ ಓಟು..?" ಅಂದೆ. "ನಾವು ಬಿ.ಎಸ್.ಪಿಗೆ" ಅಂದ ಅವರ ಪೈಕಿ ಚಿಕ್ಕವಯಸ್ಸಿನ ಒಬ್ಬ. ಅದು ಅನಿರೀಕ್ಷಿತ ಉತ್ತರ. ಇಲ್ಲಿ ಕಾಲಿಡ್ತಿದ್ದಂತೆಯೇ ಸೋನಿಯಾ ಗಾಂಧಿ ಜೈಕಾರ ಕೇಳತ್ತೆ ಅಂದುಕೊಂಡಿದ್ದರೆ, ಈ ರೈತ ಮಾಯಾವತಿ ಜಿಂದಾಬಾದ್ ಅನ್ನುತ್ತಿದ್ದಾನೆ. ಹೆಸರೇನಾದರೂ ಕನ್ಫ್ಯೂಸ್ ಮಾಡಿಕೊಂಡಿದಾನಾ ಅಂದುಕೊಂಡು "ಬಿ.ಎಸ್.ಪಿಯ ಚುನಾವಣಾ ಚಿನ್ಹೆ ಏನು" ಅಂತ ಕೇಳಿದೆ. "ಆನೆ" ಅಂದ. ಸರಿಯಾದ ಉತ್ತರ..! "ನಿಮ್ಮ ಸಂಸದರ್ಯಾರು..?" ನನ್ನ ಪ್ರಶ್ನೆ. ಆತ ತಲೆಕೆರೆದುಕೊಂಡು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದ. "ಸೋನಿಯಾ ಗಾಂಧಿ ಅನ್ನೋ ಹೆಸರು ಕೇಳಿದ್ದೀಯಾ..?" ನನ್ನ ಮತ್ತೊಂದು ಪ್ರಶ್ನೆ. "ಹ್ಞಾಂ... ಹ್ಞಾಂ... ಅವರೇ... ಅವರೇ ನಮ್ಮ ಸಂಸದೆ" ಅಂದ ಆತ. ಈ ಸಲ ನಾನು ತಲೆಕೆರೆದುಕೊಂಡೆ. ಒಂದು ಅನುಭವದ ಆಧಾರದ ಮೇಲೆ ಇಡೀ ಲೋಕಸಭಾ ಕ್ಷೇತ್ರದ ಬಗ್ಗೆ ನಿರ್ಧಾರಕ್ಕೆ ಬಂದುಬಿಡಬಾರದು.
                   ರಾಯಬರೇಲಿ ಹೃದಯ ಭಾಗಕ್ಕೆ ಬರುತ್ತಿದ್ದಂತೆ ಫಿರೋಜ್ ಗಾಂಧಿ ಕಾಲೇಜ್ ಅನ್ನೋ ದೊಡ್ಡ ಬೋರ್ಡು. ಅದರೆದುರಿಗೆ ನಿಂತು ಜನರನ್ನ ಮಾತನಾಡಿಸೋದಕ್ಕೆ ಶುರುಮಾಡಿದ್ವಿ. ಮೂರು ಜನ ವಕೀಲರು ನಿಂತುಕೊಂಡಿದ್ದರು. ಅವರ ಪೈಕಿ ಸುರೇಶ್ಚಂದ್ರ ಶ್ರೀವಾಸ್ತವ್ "ರಾಯಬರೇಲಿಯ ಅಂತಃಕರಣದಲ್ಲಿ ಸೋನಿಯಾ ಗಾಂಧಿ ಇದಾರೆ ಸಾರ್" ಅಂತಲೇ ಮಾತು ಶುರು ಮಾಡಿದರು. ಸುರೇಶ್ಚಂದ್ರರ ಲಾಜಿಕ್ಕುಗಳೇ ಬೇರೆ ಇದ್ದವು. ಅವರ ಸ್ಟೇಟ್ಮೆಂಟ್ನ ಕೆಲ ಸ್ಯಾಂಪಲ್ಗಳು ಇಲ್ಲಿವೆ "ಕೇಂದ್ರದಲ್ಲಿ ನರೇಂದ್ರ ಮೋದಿ ಗೆಲ್ಲಬೇಕು - ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಗೆಲ್ಲಬೇಕು..!" "ಸೋನಿಯಾ ಹೊರತು ಪಡಿಸಿ ಬೇರೆ ಯಾರಾದರೂ ಗೆದ್ದರೆ ಸಾವಿರಾರು ಕೋಟಿಯ ದೊಡ್ಡ ದೊಡ್ಡ ಯೋಜನೆಗಳು ಇಲ್ಲಿಗೆ ಬರೋದಿಲ್ಲ..!" "ರಾಯಬರೇಲಿಯಲ್ಲಿ ಸೋನಿಯಾ ಗಾಂಧಿ ಹೊರತುಪಡಿಸಿ ಬೇರೆ ಇನ್ಯಾರಾದರೂ ಕಾಂಗ್ರೆಸ್ನಿಂದ ಚುನಾವಣೆಗೆ ನಿಂತರೆ ಕುಡಿಯೋದಕ್ಕೆ ನೀರು ಕೂಡ ಸಿಗಲ್ಲ - ಠೇವಣಿ ಕಳೆದುಕೊಂಡು ಮನೆಗೆ ಹೋಗ್ತಾರೆ..!" ಅವರವರ ಭಾವಕ್ಕೆ - ಅವರವರ ಭಕ್ತಿಗೆ. ಇಲ್ಲಿನ ವಕೀಲರು ಸಂಸದರ ನಿಧಿಯಲ್ಲಿ ಬಾರ್ ಅಸೋಸಿಯೇಷನ್ಗೆ ಒಂದು ಸಭಾಂಗಣ - ಅದಕ್ಕೆ ಎ.ಸಿ ಸಿಕ್ಕಿದೆ ಅಂತ ಖುಷಿಯಾಗಿದಾರೆ. ಸೋನಿಯಾ ಗಾಂಧಿ ದೆಹಲಿಯಿಂದ ರಾಯಬರೇಲಿಗೆ ಅಂತ ಕೋಟಿ ಕೋಟಿ ಫಂಡ್ ಕಳಿಸ್ತಾರೆ, ಅದನ್ನ ಇಲ್ಲಿ ಸಮಾಜವಾದಿ ಪಕ್ಷದ ರಾಜ್ಯ ಸರಕಾರ ನುಂಗಿ ನೀರು ಕುಡಿಯತ್ತೆ ಅನ್ನೋದು ಈ ವಕೀಲರ ವಾದ. ಇದನ್ನ ಹೊರತುಪಡಿಸಿದರೆ ರಾಯಬರೇಲಿ ನಗರದಲ್ಲಿ ಮತ್ತೆ ಮತ್ತೆ ಕೇಳಿಬಂದಿದ್ದು ಸೋನಿಯಾ ಗಾಂಧಿ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಕೊಟ್ಟಿದಾರೆ - ರೇಲ್ವೆ ಕೋಚ್ ಫ್ಯಾಕ್ಟರಿ ಕೊಟ್ಟಿದಾರೆ ಅನ್ನೋ ಮಾತು. ಅದರಿಂದ ಸ್ಥಳೀಯರಿಗೆ ನಯಾಪೈಸೆ ಪ್ರಯೋಜನ ಆಗಿಲ್ಲ, ಎಲ್ಲಾ ಹೊರಗಿನವರೇ ತುಂಬಿಕೊಂಡಿದಾರೆ ಅಂತ ಇಬ್ಬರು ಮೂವರು ಯುವಕರು ಜೋರಾಗಿ ಕೂಗಾಡಿದರು. ಅವರು ಬಿ.ಜೆ.ಪಿ ಕಾರ್ಯಕರ್ತರು.
                  ಇಲ್ಲಿನ ಮುನ್ಶೀಗಂಜ್ನಲ್ಲಿ ಮೊದಲು ಒಂದು ಸಕ್ಕರೆ ಕಾರ್ಖಾನೆ ಇತ್ತು. ಅದು ಬಾಗಿಲು ಹಾಕಿಕೊಂಡ ಮೇಲೆ ಅದನ್ನ ಕೆಡವಿ, ಸುತ್ತಲಿನ ರೈತರಿಂದ ಒಂದಷ್ಟು ಜಮೀನು ಪಡೆದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ಸ್ ಕಟ್ತಿದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಸೋನಿಯಾ - ಪ್ರಿಯಾಂಕಾ ಭೂಮಿ ಪೂಜೆ ಮಾಡಿರುವ ಯೋಜನೆ ಇದು. ಕಾಮಗಾರಿ ಜೋರಾಗಿ ನಡೀತಿದೆ. ಅದನ್ನ ನೋಡಿಕೊಂಡು ಹಂಗೇ ಮುಂದೆ ಹೋದರೆ ಬೇಲಾ ಖಾರಾ ಅನ್ನೋ ಹಳ್ಳಿ ಸಿಕ್ಕಿತು. ಅಲ್ಲಿ ಬಗೆಹರಿಯಿತು ಸೋನಿಯಾ ಗಾಂಧಿಯವರ ಭಾರೀ ಬಹುಮತದ ಗೆಲುವಿನ ರಹಸ್ಯ..!
ಸೋನಿಯಾ ಗಾಂಧಿ

                  ನಮ್ಮೊಂದಿಗೆ ಮಾತನಾಡೋದಕ್ಕೆ ಸೇರಿದ ಜನಜಂಗುಳಿಯಲ್ಲಿ ಕುಡಿಮೀಸೆಯ ಹುಡುಗರಿದ್ದರು - ಮುಪ್ಪಾನು ಮುದುಕರಿದ್ದರು, ಮಹಿಳೆಯರು - ಮಧ್ಯವಯಸ್ಕರು, ಪದವೀಧರರು - ಒಂದಕ್ಷರ ಕಲಿಯದವರು, ಎಲ್ಲರೂ ಇದ್ದರು. ಹಸ್ತ ಮತ್ತು ಸೋನಿಯಾ ಗಾಂಧಿ ಬಿಟ್ಟು ಇನ್ನೇನೂ ಹೇಳಲಿಲ್ಲ ಅವರು. "ಧಮ್ ಇದ್ದರೆ ನರೇಂದ್ರ ಮೋದಿಗೆ ಇಲ್ಲಿ ಬಂದು ಎಲೆಕ್ಷನ್ಗೆ ನಿಲ್ಲೋದಕ್ಕೆ ಹೇಳಿ" ಅಂದ ಒಬ್ಬ. ಕೆಟ್ಟ ರಸ್ತೆಗಳು - ಕಚ್ಚಾ ಮನೆಗಳ ಬಗ್ಗೆ ಮಾತನಾಡಿದರೆ ಇಲ್ಲಿ ಕೂಡ ಅದೇ ಉತ್ತರ. ದೆಹಲಿಯಿಂದ ಸೋನಿಯಾ ಗಾಂಧಿ ನಮಗೋಸ್ಕರ ಏನೇನೆಲ್ಲಾ ಕಳಿಸ್ತಾರೆ ಗೊತ್ತಾ ಸಾರ್, ಮಧ್ಯದಲ್ಲಿ ಈ ಹರಾಮಖೋರರು ಎಲ್ಲವನ್ನೂ ತಿಂದು ಹಾಕ್ತಾರೆ ಅಂತ. ಒಬ್ಬ ಮುದುಕನ ಪಕ್ಕದಲ್ಲಿ ಕುಳಿತು "ಅಜ್ಜಾ, ನೀನು ಜೀವನದಲ್ಲಿ ಯಾವತ್ತಾದರೂ ಹಸ್ತಕ್ಕೆ ಬಿಟ್ಟು ಇನ್ಯಾವುದಕ್ಕಾದರೂ ಓಟ್ ಹಾಕಿದೀಯಾ..?" ಅಂತ ಕೇಳಿದೆ. ಕೇಳಬಾರದ್ದೇನನ್ನೋ ಕೇಳಿಬಿಟ್ಟೆನೇನೋ ಅನ್ನೋಹಾಗೆ ಸಿಟ್ಟಿಗೆದ್ದ ಆತ "ಎಂಥಾ ಮಾತು ಅಂತ ಆಡ್ತೀಯಾ ಮಗಾ... ಪಕ್ಷಾಂತರ ಅನ್ನೋದು ಆ ಆಸೆಬುರುಕ ನೇತಾಗಳ ಕೆಲಸ. ಮನುಷ್ಯನಿಗೆ ನಿಷ್ಠೆ ಅನ್ನೋದಿರಬೇಕು. ನಾನು ಯಾವತ್ತೂ ಪಕ್ಷಾಂತರ ಮಾಡಿಲ್ಲ" ಅಂದುಬಿಟ್ಟ. ಪಕ್ಷಾಂತರ ಅನ್ನೋ ಶಬ್ದಕ್ಕೆ ತಾತ ಕೊಟ್ಟ ಡೆಫಿನಿಷನ್ನು ತಲೆ ತಿರುಗಿಸಿತ್ತು. ಪಕ್ಕದಲ್ಲಿದ್ದ ಮಧ್ಯವಯಸ್ಕಳೊಬ್ಬಳಿಗೆ "ನಿನ್ನ ಓಟು ಯಾರಿಗೆ ತಾಯಿ ಈ ಸಲ" ಅಂತ ಕೇಳಿದೆ. "ಮಾಯಾವತಿಗೆ" ಅಂದಳು ಆಕೆ. ನಾನೇ ತಪ್ಪಾಗಿ ಕೇಳಿಸಿಕೊಂಡೆನಾ..? ಯಾರಿಗೆ ಹಾಕ್ತೀರಿ..? ಮತ್ತೆ ಕೇಳಿದೆ. ಮಾಯಾವತಿಗೆ - ಮತ್ತಷ್ಟು ಖಡಕ್ಕಾಗಿ ಉತ್ತರಿಸಿದಳು. ಇನ್ನೊಂದು ಸಲ ಕನ್ಫರ್ಮ್ ಮಾಡಿಕೊಳ್ಳೋಣ ಅಂದುಕೊಂಡು "ಮಾಯಾವತಿಯವರ ಪಕ್ಷದ ಚಿನ್ಹೆ ಯಾವುದು" ಅಂದೆ. ಥಟ್ಟಂತ ಉತ್ತರ ಬಂತು - "ಹಸ್ತ..!"
                   ಬೇಲಾ ಖಾರಾದಿಂದ ವಾಪಸ್ ಹೊರಟಾಗ ಇಳಿ ಸಂಜೆ. ಬಿಸಿಲಿನಲ್ಲಿ ಮನೆ ಸೇರಿದ್ದ ರೈತರು ಮತ್ತೆ ಜಮೀನುಗಳಿಗೆ ವಾಪಸಾಗಿ ಕೆಲಸದಲ್ಲಿ ತೊಡಗಿದ್ದರು. ಒಂದು ಕಡೆ ಹೆಣ್ಣುಮಕ್ಕಳು ಗೋಧಿ ಕೊಯ್ಲು ಮಾಡುತ್ತಿದ್ದರೆ ಪಕ್ಕದಲ್ಲಿ ನವಿಲಿಗಿಂತ ದೊಡ್ಡದಾದ - ಆಸ್ಟ್ರೀಚ್ಗಿಂತ ಚಿಕ್ಕದಾದ ಬಿಳಿ ಬಣ್ಣದ ಐದಾರು ಸುಂದರ ಪಕ್ಷಿಗಳು ಅಡ್ಡಾಡುತ್ತಿದ್ದವು. ಮನಮೋಹಕ ದೃಶ್ಯ ಅದು. ಆ ಪಕ್ಷಿಯ ಒಂದಷ್ಟು ಫೋಟೊ ತೆಗೆದು, ಅವುಗಳ ಹೆಸರೇನು ನೋಡಬೇಕು ಅಂದುಕೊಂಡು ಗೂಗಲ್ ಇಮೇಜ್ನಲ್ಲಿ "ರಾಯಬರೇಲಿ ಪಕ್ಷಿಗಳು" ಅಂತ ಸಚರ್್ ಕೊಟ್ಟೆ. ಸಾಲುಸಾಲಾಗಿ ಪ್ರಿಯಾಂಕಾ ಗಾಂಧಿ ಫೋಟೊಗಳು ಬಂದವು. ಥತ್..!
                  ಈ ದೊಡ್ಡವರ ಕ್ಷೇತ್ರಗಳ ಬಗ್ಗೆ ವರದಿ ಮಾಡುವಾಗ, ಅವರು ಗೆದ್ದು ದೆಹಲಿ ಕಡೆ ಹೋದ ನಂತರ ಕ್ಷೇತ್ರದ ಜೊತೆ ಹೇಗೆ ಸಂಪರ್ಕ ಇಟ್ಟುಕೊಂಡಿದ್ದಾರೆ ಅನ್ನೋದನ್ನ ನೋಡಬೇಕು. ಅದನ್ನನೋಡೋದಕ್ಕೆ ಅಂತಲೇ ರಾಯಬರೇಲಿ ಜಿಲ್ಲಾ ಕಾಂಗ್ರೆಸ್ ಕಚೇರಿ ತಿಲಕ್ ಭವನಕ್ಕೆ ಹೋಗಿದ್ದು. ದುರಸ್ತಿ ಕೆಲಸ ನಡೆಯುತ್ತಿದ್ದ ಆ ಕಚೇರಿಯ ಒಂದು ಭಾಗದ ಒಂದು ಚೇಂಬರ್ನಲ್ಲಿ ಕೆ.ಎಲ್ ಶರ್ಮಾ ಅಂತ ಒಬ್ಬರು ಮಧ್ಯವಯಸ್ಕ ತುಂಬು ತೋಳಿನ ಸಫಾರಿ ಧರಿಸಿಕೊಂಡು ಕುಳಿತಿದ್ದರು. ಅವರು ರಾಯಬರೇಲಿಯಲ್ಲಿ ಸೋನಿಯಾ ಪ್ರತಿನಿಧಿ. "ತಿಂಗಳಿಗೆ ಕನಿಷ್ಠ ಹತ್ತು ದಿನ ನಾನು ಇಲ್ಲಿರ್ತೀನಿ. ಉಳಿದಂತೆ ನನಗೆ ದೆಹಲಿಯಲ್ಲಿ ಸಂಸತ್ ಭವನದ ಬಳಿ ಒಂದು ಆಫೀಸ್ ಇದೆ. ಕ್ಷೇತ್ರಕ್ಕೆ ಸಂಬಂಧಿಸಿದ ಕುಂದುಕೊರತೆಗಳ ಅರ್ಜಿಗಳನ್ನ ಇಲ್ಲೇ ತೆಗೆದುಕೊಂಡು ಸಂಬಂಧಪಟ್ಟ ಇಲಾಖೆಗಳಿಗೆ ಕಳಿಸ್ತೀವಿ. ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯ ಆಸ್ಪತ್ರೆಗಳಿವೆ. ದೊಡ್ಡ ಮಟ್ಟದ ಚಿಕಿತ್ಸೆ ಬೇಕು ಅಂತ ಇಲ್ಲಿನ ವೈದ್ಯರು ಶಿಫಾರಸು ಮಾಡಿದರೆ ದೆಹಲಿಗೆ ಕರೆದುಕೊಂಡು ಹೋಗಿ ಸಂಬಂಧಪಟ್ಟ ಸ್ಪೆಷಲಿಸ್ಟ್ಗಳ ಹತ್ತಿರ ಚಿಕಿತ್ಸೆ ಕೊಡಿಸ್ತೀವಿ. ಇಲ್ಲೀ ತನಕ ಸುಮಾರು ಒಂದೂವರೆ ಸಾವಿರ ಜನರಿಗೆ ಹಂಗೆ ಚಿಕಿತ್ಸೆ ಸಿಕ್ಕಿದೆ. ಒಂದು ಸಲ ಏಮ್ಸ್ ಉದ್ಘಾಟನೆ ಆಗಿಬಿಟ್ಟರೆ ನಂತರ ಸಮಸ್ಯೆ ಇರಲ್ಲ ಬಿಡಿ. ಈ ಕಚೇರಿಯಿಂದ ಸರಕಾರಿ ನೌಕರಿಗಳಿಗೆ ಶಿಫಾರಸು ಮಾಡೋದಿಲ್ಲ. ಆದರೆ, ಬೇರೆ - ಬೇರೆ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸೇರಿಕೊಂಡು ಯುವಕರಿಗೆ ತರಬೇತಿ ಕೊಡೋ ವ್ಯವಸ್ಥೆ ಮಾಡಿದೀವಿ. ನೀವು ನೋಡಿರಬಹುದಲ್ಲ - ಕೋಚ್ ಫ್ಯಾಕ್ಟರಿ ಹೆಂಗಿದೆ ಅಂತ..?" ಅಂತೆಲ್ಲ ತುಂಬ ಕಾನ್ಫಿಡೆನ್ಸ್ನಿಂದ ಮಾತನಾಡುತ್ತಾ ಹೋದರು ಶಮರ್ಾ. "ಕೋಚ್ ಫ್ಯಾಕ್ಟರಿಯಲ್ಲಿ ಸ್ಥಳೀಯರಿಗೆ ಎಷ್ಟು ನೌಕರಿ ಸಿಕ್ಕಿವೆ..?" ಕೇಳಿದೆ. "ಒಂದು ಸಾವಿರದ ನಾಲ್ಕುನೂರ ನಲವತ್ತೇಳು. ಜಮೀನು ಕಳೆದುಕೊಂಡ ಕುಟುಂಬಕ್ಕೊಬ್ಬರಂತೆ ನೌಕರಿ ಕೊಟ್ಟಿದೀವಿ" ಅಂದರು. "ಅವರವರ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಕ್ಕಿದೆಯಾ..?" ಮರುಪ್ರಶ್ನೆ ಹಾಕಿದೆ. "ನಿಮಗೆ ಗೊತ್ತಿರಬೇಕಲ್ಲ, ಜಮೀನು ಕಳೆದುಕೊಂಡ ಮನೆಯವರೊಬ್ಬರಿಗೆ ಡಿ ಗ್ರೂಪ್ ಕೆಲಸ ಸಿಗತ್ತೆ. ಅವರು ಡಾಕ್ಟರೇಟ್ ಓದಿದ್ದರೂ ಡಿ ಗ್ರೂಪ್ ನೌಕರಿಯೇ" ಅಂದರು. "ನಿಮಗೂ - ಸೋನಿಯಾ ಗಾಂಧಿಯವರಿಗೂ ಸಂಪರ್ಕ ಹೇಗೆ..?" ಮತ್ತೆ ಕೇಳಿದೆ. "ಎನಿ ಟೈಮ್... ಫೋನ್ ಮಾಡ್ತೀನಿ. ಅವರು ಬಿಜಿ ಇದ್ದರೆ ಮೆಸೇಜ್ ಹಾಕಿರ್ತೀನಿ - ಫ್ರೀ ಆದ ತಕ್ಷಣ ಫೋನ್ ಮಾಡ್ತಾರೆ" ಅಂದರು ಶರ್ಮಾ. ನಂಬೋದಕ್ಕಾಗಲಿಲ್ಲ. ಇಲ್ಲಿ ಕೆಟ್ಟ ರಸ್ತೆಗಳು - ಕಚ್ಚಾ ಮನೆಗಳು - ಕೈಕೊಡುವ ಕರೆಂಟುಗಳ ಬಗ್ಗೆ ಕೇಳಿದರೆ ಇವರದೂ ಅದೇ ಉತ್ತರ "ರಾಜ್ಯ ಸರಕಾರ ಸಾರ್... ಹೊಟ್ಟೆಕಿಚ್ಚು ಈ ಕ್ಷೇತ್ರದ ಮೇಲೆ" ಅಂತ.
                  ಅಲ್ಲಿಂದ ಹೊರಟು ರಾತ್ರಿ ವಸತಿಗೆ ಅಂತ ಸರಸ್ ಹೊಟೇಲ್ಗೆ ಬಂದರೆ ಸ್ವಲ್ಪ ಹೊತ್ತಿನಲ್ಲಿ ಮೂರು ಅಚ್ಚಬಿಳಿ ಟಾಟಾ ಸಫಾರಿಗಳು ಧೂಳೆಬ್ಬಿಸಿಕೊಂಡು ಬಂದವು. ಮೂರಕ್ಕೂ ಒಂದೇ ನಂಬರ್. 5500..! ಮೂರರ ಮೇಲೂ ಬಿ.ಜೆ.ಪಿಯ ಧ್ವಜ. ಮೊದಲ ಸಫಾರಿಯಿಂದ ನಲವತ್ತರ ಆಸುಪಾಸಿನ ವ್ಯಕ್ತಿಯೊಬ್ಬರು ಇಳಿದರು. ಹಿಂದಿನ ಸಫಾರಿಗಳಿಂದ ಧಡಧಡನೆ ಇಳಿದು ಬಂದ ಹುಡುಗರು ತಲೆಗೆ ಬಿ.ಜೆ.ಪಿ ಧ್ವಜ ಸುತ್ತಿಕೊಂಡಿದ್ದರು. ಕಣ್ಣಿಗೆ ರೇಬಾನ್ ಗ್ಲಾಸು. ವಿಚಾರಿಸಿ ನೋಡಿದಾಗ ಆ ಒಡ್ಡೋಲಗದ ನಾಯಕ ಪುಷ್ಪೇಂದ್ರ ಸಿಂಗ್, ಸೋನಿಯಾ ಗಾಂಧಿ ವಿರುದ್ಧ ಬಿ.ಜೆ.ಪಿ ಟಿಕೆಟ್ ಕೇಳಿರೋ ವ್ಯಕ್ತಿ ಅನ್ನೋದು ಗೊತ್ತಾಯಿತು. ಹೊಟೇಲ್ನ ಲಾಬಿಯಲ್ಲಿ ಕುಳಿತು ಮಾತನಾಡಿದರು ಪುಷ್ಪೇಂದ್ರ ಸಿಂಗ್. ಮುಂದಕ್ಕೆ ಬಾಗಿ, ಮುಖದೆದುರಿಗೆ ಮುಖ ತಂದು, ಊರಗಲ ಕಣ್ಣು ಬಿಟ್ಟು ಪ್ರಶ್ನೆ ಕೇಳಿಸಿಕೊಳ್ಳುತ್ತಿದ್ದರು. ನಂತರ ಕುರ್ಚಿಗೆ ಒರಗಿ ಕಣ್ಣು ಮುಚ್ಚಿಕೊಂಡು ಗಾಢ ನಿದ್ದೆಯಲ್ಲಿ ಕನವರಿಸುವವರಂತೆ ಇಡೀ ಉತ್ತರ ಹೇಳಿ ಮುಗಿಸೋರು. ಮಧ್ಯದಲ್ಲಿ ಯಾರೂ ಮಾತನಾಡುವಂತಿಲ್ಲ..! "ನನಗೆ ಟಿಕೆಟ್ ಒಂದು ಕೊಟ್ಟು ನೋಡಲಿ ಸಾರ್... ಒಂದು ಲಕ್ಷ ಓಟಿನಿಂದ ಸೋನಿಯಾ ಗಾಂಧೀನ ಸೋಲಿಸದಿದ್ದರೆ ಹೆಸರು ಬದಲಿಸಿಕೊಂಡು ಬಿಡ್ತೀನಿ, ಹೆಸರು. ಕ್ಯಾ ಸಮಝೇ ಹೋ ಆಪ್ ಮುಝೆ..? ರಾಯಬರೇಲಿಯ ಹಳ್ಳಿಹಳ್ಳಿಯಲ್ಲಿ ನನ್ನ ಜನ ಇದಾರೆ" ಅಂದರು ಆತ. ಅಂಥ ಒಂದು ಹಳ್ಳಿಯನ್ನ ನಾನು ಈಗಷ್ಟೇ ನೋಡಿಕೊಂಡು ಬಂದಿದ್ದೆ. ರಾಯಬರೇಲಿಯಲ್ಲಿ ಸೋನಿಯಾ ಗಾಂಧಿಯವರನ್ನ ಸೋಲಿಸೋದು ಯಾಕೆ ಅಸಾಧ್ಯ ಅನ್ನೋದು ಅಲ್ಲಿ ಅರ್ಥ ಆಗಿತ್ತು - ಬಿ.ಜೆ.ಪಿ ಚಿಗಿತುಕೊಳ್ಳೋದು ಯಾಕೆ ಅಸಾಧ್ಯ ಅನ್ನೋದು ಇಲ್ಲಿ ಅರ್ಥ ಆಯಿತು..!

ಕುರುಕ್ಷೇತ್ರ ನಡೆದ ಭೂಮಿಯಲ್ಲಿ ಮಹಾಯುದ್ಧ..!

                         ಹೊರಗೆ ಬಂದೊಡನೆ ಗಾಳಿ... ಬಿಸಿ ಅಂದರೆ ಬಿಸಿ. ಅಷ್ಟು ದೂರದಲ್ಲಿ ಮೊಳಕಾಲ ತನಕ ಪ್ಯಾಂಟ್ ಏರಿಸಿಕೊಂಡು ಆಟೋದಲ್ಲಿ ಕುಳಿತಿದ್ದವನು "ಕಿಧರ್ ಜಾನಾ ಹೈ..?" ಅಂತ ಕೇಳಿದ. ಉತ್ತರಿಸಬೇಕು ಅನ್ನುವಷ್ಟರಲ್ಲಿ ಇನ್ನೊಂದು ಆಟೋ ಯಮವೇಗದಲ್ಲಿ ಬಂದು ಎದುರಿಗೆ ನಿಂತಿತು. "ಆ ಜಾವೋ ಸಾಬ್" ಅಂದ ಅವನು. ಅದು ಅರ್ಧ ಮನವಿಯಂತೆಯೂ ಇನ್ನರ್ಧ ಆಜ್ಞೆಯಂತೆಯೂ ಇತ್ತು. ಅಷ್ಟರಲ್ಲಿ ಅದೆಲ್ಲಿಂದಲೋ ಬಂದ ಭಿಕ್ಷೆಯ ಹುಡುಗಿ ಅಂಗಿ ಹಿಡಿದು ಎಳೆಯೋದಕ್ಕೆ ಶುರು ಮಾಡಿದಳು. ನಾನು ಹೊರಗೆ ಬಂದದ್ದು ವಿಮಾನ ನಿಲ್ದಾಣದಿಂದಲಾ - ರೇಲ್ವೆ ಸ್ಟೇಷನ್ನಿಂದಲಾ..? ಹಿಂದಿರುಗಿ ನೋಡಿದೆ. ವಿಮಾನ ನಿಲ್ದಾಣವೇ..! ಒಂದು ಲಡಕಾಸಿ ಸುಝುಕಿ ಬೈಕ್ನಲ್ಲಿ ಬಂದು ನಿಂತವನೊಬ್ಬ ಇಬ್ಬರೂ ಆಟೋದವರಿಗೆ ಹಿಂದಿಯ ಹೋಲಿಕೆಯಿದ್ದ ಭಾಷೆಯಲ್ಲಿ ಅದೇನೋ ಬೈಯ್ಯತೊಡಗಿದ. ಅವನು ಕೈ ಎತ್ತಿದಾಗ ಶರ್ಟು ಮೇಲಕ್ಕೇರಿತು. ಬೆಲ್ಟಿನಲ್ಲಿ ಪಿಸ್ತೂಲು..! ಈಗ ಖಚಿತವಾಯ್ತು, ನಾವು ಬಂದಿರುವುದು ಉತ್ತರ ಪ್ರದೇಶಕ್ಕೇ... ಇದು ರಾಜಧಾನಿ ಲಖ್ನೋ..!
                        "ಆಜ್ ಕಲ್ ತೋ ಮೋದಿ ಕಾ ನಾಮ್ ಬಹುತ್ ಚಲ್ ರಹಾ ಹೈ" (ಇತ್ತೀಚೆಗೆ ಮೋದಿ ಬಗ್ಗೆ ತುಂಬಾ ಚಚರ್ೆ ಆಗ್ತಿದೆ) ಅಂದ ಆಟೋ ಡ್ರೈವರ್ ಕಲೀಂ. ನಾವು ಚುನಾವಣೆ ವರದಿಗೆ ಬೆಂಗಳೂರಿನಿಂದ ಬಂದಿರೋ ಪತ್ರಕರ್ತರು ಅನ್ನೋದು ಗೊತ್ತಾದ ನಂತರ ಅವನಲ್ಲಿ ಮಾತನಾಡುವ ಉತ್ಸಾಹ ಗರಿಗೆದರಿತ್ತು. ಉತ್ತರ ಪ್ರದೇಶದ ರಾಜಕೀಯವನ್ನು ವಣರ್ಿಸೋದಕ್ಕೆ ಕಲೀಂ ಬಳಸುತ್ತಿದ್ದ ಭಾಷೆ ಬಹಳ ಆಕರ್ಷಕವಾಗಿತ್ತು. "ನೋಡಿ ಸಾಬ್ ಇಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬ ಬಡವ ಆಗಿರ್ತಾನೆ. ಇನ್ನೊಬ್ಬ ಗೂಂಡಾ. ಮೂರನೆಯವನು ನೇತಾ..!" ಒಂದೇ ವಾಕ್ಯದಲ್ಲಿ ಇಡೀ ಉತ್ತರ ಪ್ರದೇಶವನ್ನು ವರ್ಣಿಸಿಬಿಟ್ಟ ಪುಣ್ಯಾತ್ಮ. "ಮಾಯಾವತಿ ಇದ್ದಾಗ ಹಿಂಗಿರಲಿಲ್ಲ ಸಾಬ್... ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾದಾಗಿನಿಂದ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಎರಡು ಗುಟುಕು ಕುಡಿದುಬಿಟ್ಟರೆ ಎಲ್ಲರೂ ಗೂಂಡಾಗಳೇ. ಯಾವನು ಯಾವಾಗ ಬಂದೂಕು ತೆಗೀತಾನೋ ಗೊತ್ತೇ ಆಗಲ್ಲ" ಅಂದ. "ಆದರೂ ಮುಸ್ಲಿಮರ ಓಟು ಅಖಿಲೇಶ್ ಯಾದವ್ರ ಸಮಾಜವಾದಿ ಪಕ್ಷಕ್ಕೇ ಅಲ್ಲವಾ..?" ಅಂತ ಸುಮ್ಮನೇ ಕಿಚಾಯಿಸಿದೆ. ಕಲೀಂನ ಮುಖ ಏಕಾಏಕಿ ಗಂಭೀರವಾಯಿತು. "ಯಾವನು ಹೇಳಿದ ನಿಮಗೆ..? ಮುಜಫರ್ನಗರದಲ್ಲಿ ಇದೇ ಅಖಿಲೇಶ್ ಯಾದವ್ *********** ಮುಸ್ಲಿಮರದು" ಅಂತ ಕೆಟ್ಟ ಶಬ್ದವೊಂದನ್ನ ಬಳಸಿದ. "ರಾಯಚೂರಿಗೆ ಬಂದಂಗೆ ಅನ್ನಿಸ್ತಿದೆ ಸಾರ್" ಅಂತ ಕ್ಯಾಮರಾಮ್ಯಾನ್ ಕಿರಣ್ ಹೇಳುವದರೊಂದಿಗೆ ಆಟೋ ಪ್ರಯಾಣ ಮುಕ್ತಾಯಗೊಂಡಿತ್ತು. ನಾವು ಲಖ್ನೋದ ಹೃದಯ ಭಾಗ ಚಾರ್ ಬಾಗಿಗೆ ಬಂದು ತಲುಪಿದ್ವಿ.
ಗೋಮತಿ ಪಾರ್ಕ್ ನಲ್ಲಿರುವ ಮಾಯಾವತಿ ಮೂರ್ತಿ

                         ಇದಷ್ಟನ್ನೂ ಓದಿ ಉತ್ತರ ಪ್ರದೇಶ ಅಂದರೆ ಒಂದು ಅತಿ ಹಿಂದುಳಿದ ಪ್ರದೇಶ ಅನ್ನೋ ನಿರ್ಧಾರಕ್ಕೆ ಬಂದುಬಿಡಬೇಡಿ. ಅಲ್ಲಿನ ವಿಧಾನ ಭವನದ ಸುತ್ತ ಅಡ್ಡಾಡಿದರೆ ಇದೊಂದು ಶ್ರೀಮಂತ ಊರು ಅನ್ನೋದು ಗೊತ್ತಾಗತ್ತೆ. ಇಲ್ಲಿನ ಮಂತ್ರಿ ಮಹೋದಯರ ಬಂಗಲೆಗಳ ಎದುರು ನಮ್ಮವರ ಬಂಗಲೆಗಳು ಏನೇನೂ ಅಲ್ಲ. ಮಾಯಾವತಿ ಮನೆಯ ಹಿತ್ತಾಳೆಯ ಗೇಟು ಕಡಿಮೆ ಅಂದರೂ ಒಂದು ಅಡಿ ದಪ್ಪ ಇದೆ. ಅದ್ಹೇಗೆ ತೆಗೆದು - ಹಾಕಿ ಮಾಡ್ತಾರೋ ಯಾವನಿಗೆ ಗೊತ್ತು..? ಗೋಮತಿನಗರದ ಡಾ. ಬಿ. ಆರ್ ಅಂಬೇಡ್ಕರ್ ಸಾಮಾಜಿಕ್ ಪರಿವರ್ತನ್ ಸ್ಥಳಕ್ಕೆ ಗ್ರಾನೈಟ್ ಅಲ್ಲ - ದುಡ್ಡಿನ ಕಂತೆ ಹೊದಿಸಿದ್ದಾರೇನೋ ಅನ್ನಿಸತ್ತೆ. ಆದರೆ ಅಷ್ಟೆತ್ತರದ ಮಾಯಾವತಿಯ ಪುತ್ಥಳಿ ಮತ್ತು ಸಾಲುಸಾಲಾದ ಆನೆಯ ಮೂರ್ತಿ (ಆನೆ, ಬಿ.ಎಸ್.ಪಿಯ ಚುನಾವಣಾ ಚಿನ್ಹೆ) ಗಳನ್ನು ನೋಡಿದಾಗ ಮಾತ್ರ ವಾಕರಿಕೆ ಬರತ್ತೆ. ಸಾರ್ವಜನಿಕರ ದುಡ್ಡಿನಲ್ಲಿ ಇದನ್ನೆಲ್ಲ ಮಾಡುವ ವಿಕೃತಿ ಅದ್ಯಾಕಾದರೂ ಬರತ್ತೋ ನಾಯಕರಿಗೆ. ಇಂಥ ಇನ್ನೂ ಏಳು ಪಾಕರ್್ಗಳಿವೆ ಲಖ್ನೋದಲ್ಲಿ..! ಆಳುವವರು ಮತ್ತು ಆಳಿಸಿಕೊಳ್ಳುವವರ ಮಧ್ಯದ ಕಂದಕ ಇಲ್ಲಿ ಕಂಡಷ್ಟು ಸ್ಪಷ್ಟವಾಗಿ ಮತ್ತು ವಿಸ್ತಾರವಾಗಿ ಇನ್ನೆಲ್ಲೂ ಕಂಡಿರಲಿಲ್ಲ. ಬಿಡಿ, ವಿಷಯಕ್ಕೆ ಬರೋಣ...
                  ಎಂಭತ್ತು ಲೋಕಸಭಾ ಕ್ಷೇತ್ರಗಳಿರೋ ರಾಜ್ಯ ಇದು. ದೆಹಲಿ ಸಿಂಹಾಸನದ ದಾರಿ ಉತ್ತರ ಪ್ರದೇಶದ ಮೂಲಕವೇ ಹಾದು ಹೋಗತ್ತೆ ಅನ್ನೋ ಮಾತು ಸವಕಲಾಗಿರಬಹುದು. ಆದರೆ, ಸುಳ್ಳಾಗಿಲ್ಲ. ಪಿ.ವಿ ನರಸಿಂಹರಾವ್ ಒಬ್ಬ ಅಪವಾದ ಅನ್ನೋದು ಬಿಟ್ಟರೆ, ಉತ್ತರ ಪ್ರದೇಶವವನ್ನು ಒಲಿಸಿಕೊಳ್ಳದೇ ಬಂದವರನ್ನ ದೆಹಲಿ ಒಳಗೆ ಬಿಟ್ಟುಕೊಂಡಿಲ್ಲ. ಅವರಿಗೆ ಕಿರೀಟ ದಕ್ಕಿಲ್ಲ. ರಾಷ್ಟ್ರ ರಾಜಕಾರಣದಲ್ಲಿ ತನಗೆ ಇರುವ ಪ್ರಾಮುಖ್ಯತೆಯನ್ನು ಸರಿಯಾಗಿ ಬಳಸಿಕೊಂಡಿದ್ದರೆ ಈ ರಾಜ್ಯ ಹೀಗಿರುತ್ತಿರಲಿಲ್ಲ. "ಇಲ್ಲಿ ಜನ ಚುನಾವಣೆಯ ಹಿಂದಿನ ದಿನದ ತನಕ ಅಭಿವೃದ್ಧಿಯ ಬಗ್ಗೆ ಮಾತಾಡ್ತಾರೆ. ಓಟು ಹಾಕೋದು ಮಾತ್ರ ಜಾತಿಯನ್ನ ನೋಡಿಯೇ" ಅಂತ ಮಾರ್ಮಿಕವಾಗಿ ನಕ್ಕವರು ಪ್ರತ್ಯುಷ್ ಮಣಿ ತ್ರಿಪಾಠಿ. ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನ ಸದಸ್ಯ. ಉತ್ತರ ಪ್ರದೇಶದ ರಾಜಕಾರಣವನ್ನು ಆಳವಾಗಿ ಅಧ್ಯಯನ ಮಾಡಿದ ಮನುಷ್ಯ. "ಬಿ.ಜೆ.ಪಿ ದೊಡ್ಡ ಮಟ್ಟದಲ್ಲಿ ಗೆಲ್ಲುವ ಸಾಧ್ಯತೆ ಇದೆ. ಅದಕ್ಕೆ ಮೋದಿ ಅಲೆ ಒಂದೇ ಕಾರಣ ಅಲ್ಲ. ಇಲ್ಲಿ ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ. ಅಧಿಕಾರಕ್ಕೆ ಬಂದ ಎರಡೇ ವರ್ಷಗಳಲ್ಲಿ ಅಖಿಲೇಷ್ ಯಾದವ್ ದೊಡ್ಡ ಮಟ್ಟದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಅಮಿತ್ ಶಾ ಬಂದ ನಂತರ ಮೇಲ್ವರ್ಗದ ಹಿಂದೂ ಮತಗಳ ಮೇಲೆ ಬಿ.ಜೆ.ಪಿ ಹಿಡಿತ ಹೆಚ್ಚಾಗಿದೆ. ಬ್ರಾಹ್ಮಣ - ದಲಿತ ಮತಬ್ಯಾಂಕ್ ಇಟ್ಟುಕೊಂಡು ಗೆಲ್ಲುತ್ತಿದ್ದ ಮಾಯಾವತಿ ಈ ಸಲ ಬ್ರಾಹ್ಮಣರ ಮತಗಳನ್ನ ಮರೆಯಬೇಕು. ಬಿ.ಜೆ.ಪಿ ಗೆಲ್ಲೋದಕ್ಕೆ ಏನೇನು ಬೇಕೋ ಎಲ್ಲಾ ಇಲ್ಲಿದೆ" ಅನ್ನೋದು ತ್ರಿಪಾಠಿಯವರ ವಾದ. ಹೆಚ್ಚೂ ಕಡಿಮೆ ಎಲ್ಲಾ ಚುನಾವಣೆ ಪೂರ್ವ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿಯ ದೊಡ್ಡ ಗೆಲುವಿನ ಭವಿಷ್ಯ ನುಡಿಯುತ್ತಿವೆ. 30 ರಿಂದ 47 ಸ್ಥಾನಗಳಂತೆ. ಸಧ್ಯಕ್ಕೆ ಹತ್ತೇ ಜನ ಬಿ.ಜೆ.ಪಿ ಸಂಸದರಿರೋದು ಇಲ್ಲಿ. ಕನಿಷ್ಠ ಮೂವತ್ತು ಸ್ಥಾನಗಳಲ್ಲಿ ಗೆದ್ದರೂ, ಕಳೆದ ಚುನಾವಣೆಯ ಮೂರು ಪಟ್ಟು ಹೆಚ್ಚು..! ಅದೇನು ಕಡಿಮೆ ಸಾಧನೆ ಅಲ್ಲ.
ಅಮಿತ್ ಶಾ

                  ತುಂಬ ಕುತೂಹಲ ಇದ್ದದ್ದು ಈ ಸಂಭವನೀಯ ಗೆಲುವಿನಲ್ಲಿ ಅಮಿತ್ ಶಾ ಪಾತ್ರ ಏನು ಅನ್ನೋದರ ಬಗ್ಗೆ. ಹತ್ತು ತಿಂಗಳ ಹಿಂದೆ ಏಕಾಏಕಿ ಉತ್ತರ ಪ್ರದೇಶದ ಬಿ.ಜೆ.ಪಿ ಉಸ್ತುವಾರಿ ವಹಿಸಿಕೊಂಡು ಗುಜರಾತದಿಂದ ಬಂದಿಳಿದರು ಅಮಿತ್ ಶಾ. ಸ್ಥಳೀಯ ಮುಖಂಡರ ಮೊದಲ ಸಭೆಯಲ್ಲಿ ಶಾ ಮಾಡಿದ ಘೋಷಣೆ "ಬೂತ್ ಜೀತೊ - ಚುನಾವ್ ಜೀತೊ" (ಬೂತ್ ಗೆಲ್ಲಿ - ಚುನಾವಣೆ ಗೆಲ್ಲಿ). ಅಮಿತ್ ಶಾ ಪಾಲಿಗೆ ಉತ್ತರ ಪ್ರದೇಶದಲ್ಲಿ ಸ್ಥಧರ್ೆ ಇರೋದು ಎಂಭತ್ತು ಲೋಕಸಭಾ ಕ್ಷೇತ್ರಗಳಲ್ಲಲ್ಲ. ಒಂದು ಲಕ್ಷ ಅರವತ್ತೇಳು ಸಾವಿರದ ಚಿಲ್ಲರೆ ಪೋಲಿಂಗ್ ಬೂತ್ಗಳಲ್ಲಿ..! ಇದು ಅವರಿಗೆ ಸೂತ್ರ ಸಂಬಂಧ ಇಲ್ಲದ ರಾಜ್ಯ. ಏಳೆಂಟು ಬಣಗಳಾಗಿ ಒಡೆದು ಹೋಗಿದ್ದ ಬಿ.ಜೆ.ಪಿ ಯಾವ ಬಣದ ಯಾವ ಮುಖಂಡನ ಜೊತೆಗೂ ಅಮಿತ್ ಶಾಗೆ ಗಾಢ ಸಂಬಂಧಗಳಿರಲಿಲ್ಲ. ಇದು ಉತ್ತರ ಪ್ರದೇಶದಲ್ಲಿ ಇವರಿಗೆ ದೊಡ್ಡ ಪ್ಲಸ್ ಪಾಯಿಂಟ್. ಯಾವುದೇ ಭಿಡೆ ಇಲ್ಲದೇ ತಪ್ಪುಗಳನ್ನ ಸರಿ ಮಾಡೋದಕ್ಕೆ ನಿಂತರು. ಹಿರಿಯ ನಾಗರಿಕರ ಸಾಲಿಗೆ ಸೇರಿದ್ದ ಮುಖಂಡರಿಗೆ ಸಲಹಾ ಸಮಿತಿಯ ಕೆಲಸ ಕೊಟ್ಟು ಯುವ ನಾಯಕರನ್ನ ಕೆಲಸಕ್ಕೆ ಹಚ್ಚಿದರು. ಪಕ್ಷಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ವರುಣ್ ಗಾಂಧಿಯಂಥವರ ಮಾತು ನಡೆಯೋದಕ್ಕೆ ಶುರುವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಅಮಿತ್ ಶಾ ಆರ್.ಎಸ್.ಎಸ್ ಮೂಲದಿಂದ ಬಿ.ಜೆ.ಪಿಗೆ ಬಂದು ನಂತರದ ಬೆಳವಣಿಗೆಗಳಿಂದ ದೂರವಾಗಿದ್ದವರನ್ನ ವಾಪಸ್ ಕರೆದುಕೊಂಡು ಬಂದರು. ಗೆಲುವಿನ ಸಾಧ್ಯತೆ ಬಿಟ್ಟರೆ ಇನ್ನೊಂದೇ ಒಂದು ಅಂಶವನ್ನು ಗಣನೆಗೆ ತೆಗೆದುಕೊಳ್ಳದೇ ಅಭ್ಯರ್ಥಿಗಳ ಆಯ್ಕೆ ಮಾಡಿದರು. (ಎಂಭತ್ತು ಕ್ಷೇತ್ರಗಳ ಪೈಕಿ ಇಪ್ಪತ್ತೈದು ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳಿಂದ ಬಂದವರಿಗೆ ಟಿಕೆಟ್ ಕೊಡಲಾಗಿದೆ. ಅದು ಸ್ಥಳೀಯ ಬಿ.ಜೆ.ಪಿ ಮುಖಂಡರಿಗೆ ಸರಿ ಬಂದಿಲ್ಲ. ಎಲ್ಲೇನಾದರೂ ಹೆಚ್ಚೂ ಕಡಿಮೆಯಾದರೆ ಅಮಿತ್ ಶಾ ತಲೆಗೆ ಬರತ್ತೆ..!) ಆತ ಎಲ್ಲೂ ಕೋಮುವಾದಿ ಮಾತುಗಳನ್ನ ಆಡಲಿಲ್ಲ. ಅಯೋಧ್ಯೆಯ ರಾಮಮಂದಿರದ ದರ್ಶನ ಮಾಡಿಕೊಂಡು ಬಂದು ತಲುಪಿಸಬೇಕಾದ ಸಂದೇಶವನ್ನು ತಲುಪಿಸಬೇಕಾದಲ್ಲಿ ತಲುಪಿಸಿದರು. ಜಡ್ಡುಗಟ್ಟಿಹೋಗಿದ್ದ ಬಿ.ಜೆ.ಪಿ ಕೇಡರ್ಗಳಲ್ಲಿ ಮಿಂಚಿನ ಸಂಚಾರ ಉಂಟಾಗಿದ್ದೇ ಈ ಮನುಷ್ಯ ಬಂದ ಮೇಲೆ. ಕೋಮುವಾದಿ ಅಜೆಂಡಾ, ಅವರ ಮೈಮೇಲಿನ ಕೇಸುಗಳು, ಗುಜರಾತ್ ಅಭಿವೃದ್ಧಿಯ ವೈಭವೀಕರಣ ಇವೆಲ್ಲಾ ಚರ್ಚೆಗಳು ನಡೆಯುತ್ತಿರುತ್ತವೆ. ಆದರೆ, ಅಮಿತ್ ಶಾರ ಸಂಘಟನಾ ಶಕ್ತಿಯನ್ನ ಒರೆಗೆ ಹಚ್ಚಿದ್ದು ಉತ್ತರ ಪ್ರದೇಶ. ನರೇಂದ್ರ ಮೋದಿ ಅದೆಂಥಾ ಸಶಕ್ತ ದಂಡನಾಯಕನೊಬ್ಬನನ್ನ ತಯಾರು ಮಾಡಿಟ್ಟುಕೊಂಡಿದ್ದಾರೆ ಅನ್ನೋದು ಕರೆಕ್ಟಾಗಿ ಅರ್ಥ ಆಗಬೇಕು ಅಂದರೆ ಇಲ್ಲಿಗೆ ಬಂದ ಹತ್ತು ತಿಂಗಳಲ್ಲಿ ಅಮಿತ್ ಶಾ ಮಾಡಿದ ಕೆಲಸವನ್ನ ನೋಡಬೇಕು.
                 ನಾವು ಕರ್ನಾಟಕದಲ್ಲಿ ಜಾತಿ ರಾಜಕೀಯ ಜಾಸ್ತಿ ಅಂತ ಮಾತಾಡಿಕೊಳ್ತೀವಿ. ಉತ್ತರ ಪ್ರದೇಶಕ್ಕೆ ಹೋಲಿಸಿದರೆ ನಮ್ಮದು ಏನೇನೂ ಅಲ್ಲ. ಸ್ವಾತಂತ್ರ್ಯಾ ನಂತರ ಎಲ್ಲಾ ಕಡೆ ಇದ್ದಂತೆ ಇಲ್ಲಿ ಕೂಡ ಕಾಂಗ್ರೆಸ್ ಬಲಿಷ್ಠವಾಗಿತ್ತು. ದಲಿತರು - ಹಿಂದುಳಿದವರು - ಮುಸ್ಲಿಮರು. ಕಾಂಗ್ರೆಸ್ಗೆ ಇನ್ನೇನು ಬೇಕು..? "ಅಜಗರ್" ಅಂದರೆ "ಆಹಿರ್, ಜಾಟ್, ಗೂಜರ್, ರಾಜಪೂತ್" ಅವರು ಯಾವ ಕಡೆಗಿರ್ತಾರೋ ಗೆಲುವು ಆ ಕಡೆ ಅನ್ನೋದು ಪ್ರಚಲಿತವಿತ್ತು. ಅಂಥದ್ದರಲ್ಲಿ, ಇತರ ಹಿಂದುಳಿದ ವರ್ಗಗಳ ಮತಗಳನ್ನ ಕಾಂಗ್ರೆಸ್ನಿಂದ ಸೆಳೆದುಕೊಂಡು ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಚಿಗಿತುಕೊಂಡರು. ಅದರಿಂದ ಕಾಂಗ್ರೆಸ್ಗೆ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ರಾಮ ಜನ್ಮಭೂಮಿ ಹೋರಾಟ ಮೇಲ್ವರ್ಗದ ಹಿಂದೂಗಳನ್ನ ಕಾಂಗ್ರೆಸ್ನಿಂದ ದೂರ ಮಾಡಿ ಬಿ.ಜೆ.ಪಿಯನ್ನು ಬೆಳೆಸಿತು. ಇದರಿಂದ ಕೊನೆಪಕ್ಷ ಮುಸ್ಲಿಂ ಮತಗಳಾದರೂ ಕಾಂಗ್ರೆ ಗಟ್ಟಿಯಾದವಾ ಅಂದರೆ ಅದೂ ಇಲ್ಲ. ಕಾಂಗ್ರೆಸ್ ಬಾಬರಿ ಮಸೀದಿ ವಿಷಯದಲ್ಲಿ ತಮ್ಮ ಬೆನ್ನಿಗೆ ಚೂರಿ ಇರಿಯಿತು ಅಂದುಕೊಂಡ ಅನೇಕ ಮುಸ್ಲಿಂ ಮುಖಂಡರು ಮುಲಾಯಂ ಸಿಂಗ್ ಯಾದವ್ ಜೊತೆ ಗುರುತಿಸಿಕೊಂಡರು.
ಕಾನ್ಶೀರಾಮ್
 ಅದೇ ಹೊತ್ತಿಗೆ ಕಾನ್ಶಿರಾಮ್ ದಲಿತ ಚಳವಳಿ ಶುರುಮಾಡಿ ಬಹುಜನ ಸಮಾಜ ಪಾರ್ಟಿ ಮೂಲಕ ಕಾಂಗ್ರೆಸ್ ಓಟ್ ಬ್ಯಾಂಕಿಗೆ ಕನ್ನ ಕೊರೆದುಬಿಟ್ಟರು. ಬ್ರಾಹ್ಮಣ ಮತ್ತು ಮೇಲ್ವರ್ಗದ ಹಿಂದೂ ವಿರೋಧಿ ಘೋಷಣೆಗಳಿಂದ ಗುರುತಿಸಲ್ಪಟ್ಟ ಚಳವಳಿ ಅದು. "ಭೂರಾಬಾಲ್ ಸಾಫ್ ಕರೋ" (ಭೂಮಿಹಾರ್, ರಾಜಪೂತ್, ಬ್ರಾಹ್ಮಣ, ಲಾಲಾರನ್ನು ಬಡಿದುಹಾಕಿ) ಅಂತ ಬಿಹಾರದಿಂದ ಹೊರಟ ಘೋಷಣೆ ಉತ್ತರ ಪ್ರದೇಶದ ದಲಿತರನ್ನ ರೋಮಾಂಚನಕ್ಕೀಡು ಮಾಡಿತ್ತು. "ತಿಲಕ್, ತರಾಜೂ, ತಲವಾರ್... ಇನ್ ಕೋ ಮಾರೋ ಜೂತೆ ಚಾರ್" ಅನ್ನೋ ಘೋಷಣೆ ಉತ್ತರ ಪ್ರದೇಶದ ಮೂಲೆಮೂಲೆಯಲ್ಲಿ ಮೊಳಗಿತು. ತಿಲಕ ಅಂದರೆ ಬ್ರಾಹ್ಮಣ. ತರಾಜೂ ಅಂದರೆ ತಕ್ಕಡಿ. ಅದು ವೈಶ್ಯರ ಪ್ರತೀಕ. ಇನ್ನು ತಲವಾರ್ ಅಂದರೆ ಖಡ್ಗ. ಅದು ಕ್ಷತ್ರಿಯರ ಗುರುತು. ಇವಕ್ಕೆ ಚಪ್ಪಲಿಯಲ್ಲಿ ಹೊಡೆಯಿರಿ ಅನ್ನೋ ಘೋಷಣೆ ಕೂಗಿತು ಬಹುಜನ ಸಮಾಜ ಪಕ್ಷ. ಕಾಂಗ್ರೆಸ್ ಪಾಳೆಯದಿಂದ ದಲಿತ ಮತಗಳು ಒಕ್ಕಲೆದ್ದು ಬಿ.ಎಸ್.ಪಿ ತೆಕ್ಕೆಗೆ ಬಂದವು. ತುತರ್ು ಪರಿಸ್ಥಿತಿ ನಂತರ ಅಡ್ರೆಸ್ಸಿಗಿಲ್ಲದಂತೆ ಆಗಿದ್ದ ಕಾಂಗ್ರೆಸ್ ನಿಧಾನವಾಗಿ ಚಿಗಿತುಕೊಳ್ಳಬೇಕು ಅನ್ನುವಷ್ಟರಲ್ಲಿ ಮೇಲಿಂದ ಮೇಲೆ ಹೊಡೆತ ಬಿದ್ದವು ಅದಕ್ಕೆ. ಬರೀ ದಲಿತ ಪರ ಹೋರಾಟದಿಂದ ಅಧಿಕಾರದ ಗದ್ದುಗೆ ಏರಲು ಸಾಧ್ಯವಿಲ್ಲ ಅನ್ನೋದನ್ನ ಅರ್ಥ ಮಾಡಿಕೊಂಡ ಮಾಯಾವತಿ "ಸೋಷಿಯಲ್ ಎಂಜನಿಯರಿಂಗ್" ಅನ್ನೋ ಪರಿಕಲ್ಪನೆ ತಂದರು. ಬ್ರಾಹ್ಮಣ ದಲಿತರು ಒಂದಾಗಿ ಸಿಂಹಾಸನ ಏರುವ ಕಾನ್ಸೆಪ್ಟ್ ಅದು. "ತಿಲಕ್, ತರಾಜೂ, ತಲವಾರ್... ಇನ್ಕೋ ಮಾರೋ ಜೂತೆ ಚಾರ್" ಅಂದಿದ್ದ ಇದೇ ಮಾಯಾವತಿ "ಪಂಡಿತ್ - ಬ್ರಾಹ್ಮಣ ಶಂಖ್ ಬಜಾಯೇಗಾ... ಹಾಥಿ ಬಢತಾ ಜಾಯೇಗಾ..." (ಪಂಡಿತ ಬ್ರಾಹ್ಮಣರು ಶಂಖ ಬಾರಿಸುತ್ತಿದ್ದರೆ - ಆನೆ ಮುನ್ನಡೆಯುತ್ತದೆ..!) ಅಂದುಬಿಟ್ಟರು..!  "ಹಾಥಿ ನಹೀ ಹೈ ಯೇ ಗಣೇಶ್ ಹೈ... ಬ್ರಹ್ಮ, ವಿಷ್ಣು, ಮಹೇಶ್ ಹೈ" ಅನ್ನೋದು ತಮ್ಮ ಚುನಾವಣಾ ಗುರುತಿನ ಚಿನ್ಹೆ ಆನೆಯ ಜೊತೆ ಬ್ರಾಹ್ಮಣ ಸಮುದಾಯವನ್ನು ಗುರುತಿಸಲು ಮಾಯಾವತಿ ಮಾಡಿದ ಇನ್ನೊಂದು ಘೋಷಣೆ. ಅದು ವಕರ್್ಔಟ್ ಆಯಿತು. ನಂತರ ಮುಸ್ಲಿಂ - ಯಾದವ್ ಫ್ಯಾಕ್ಟರ್ ಇಟ್ಟುಕೊಂಡು ಸಮಾಜವಾದಿ ಪಕ್ಷ ಚುನಾವಣೆ ಗೆದ್ದು ಅಖಿಲೇಶ್ ಯಾದವ್ ಮುಖ್ಯಮಂತ್ರಿ ಆದರು. ಲಖ್ನೋದ ಪುರಾತನ ಕಾಫಿ ಹೌಸ್ನಲ್ಲಿ ಕುಳಿತು ಪಾಲಿಟಿಕಲ್ ಸೈನ್ಸ್ನ ನಿವೃತ್ತ ಪ್ರಾಧ್ಯಾಪಕ ರಮೇಶ್ ದೀಕ್ಷಿತ್ ಇವೆಲ್ಲವನ್ನೂ ವಿವರಿಸುತ್ತಿದ್ದರೆ, ಜಾತಿ ಸಮೀಕರಣಗಳ ಅಧ್ಯಯನಕ್ಕೆ ಉತ್ತರ ಪ್ರದೇಶಕ್ಕಿಂತ ಸೂಕ್ತ ರಾಜ್ಯ ಇನ್ನೊಂದಿಲ್ಲ ಅನ್ನಿಸುತ್ತಿತ್ತು.
                   ಆದರೆ, ಈ ಸಲ ಬಿ.ಜೆ.ಪಿಯ ಸಂಭವನೀಯ ಗೆಲುವಿನಲ್ಲಿ ಜಾತಿ ಹೇಗೆ ಕೆಲಸ ಮಾಡುತ್ತೆ ಅನ್ನೋ ಕುತೂಹಲ ಸಹಜ. ಮೇಲ್ವರ್ಗದ ಹಿಂದೂಗಳೂ ಮತ್ತು ಇತರ ಹಿಂದುಳಿದ ವರ್ಗಗಳ ಮತಗಳು ನಮ್ಮ ಪಾಲಿಗೆ ಇವೆ ಅನ್ನೋ ಉತ್ಸಾಹದಲ್ಲಿ ಕಮಲ ಪಕ್ಷ ಇದೆ. ಇನ್ನು ಈ ಸಲ ಮುಸ್ಲಿಂ ಮತಗಳು ಸಾರಾಸಗಟಾಗಿ ಒಂದು ಪಕ್ಷಕ್ಕೆ ಹೋಗುವುದಿಲ್ಲ. ಬಾಬರಿ ಮಸೀದಿ ವಿಷಯದಲ್ಲಿ ಕಾಂಗ್ರೆಸ್ ಮತ್ತು ಮುಜಫರ್ನಗರ ದಂಗೆ ವಿಷಯದಲ್ಲಿ ಸಮಾಜವಾದಿ ಪಕ್ಷಗಳು ತಮ್ಮ ಬೆನ್ನಿಗೆ ಇರಿದಿವೆ ಅನ್ನೋ ನಂಬಿಕೆ ಮುಸ್ಲಿಮರದು. ಅವರ ಪೈಕಿ ಕೆಲವರು ಬಿ.ಎಸ್.ಪಿ ಕಡೆ ವಾಲಬಹುದಾದರೂ ಬಹುತೇಕರು ತಮ್ಮ - ತಮ್ಮ ಕ್ಷೇತ್ರಗಳಲ್ಲಿ ಬಿ.ಜೆ.ಪಿ ವಿರುದ್ಧ ತೊಡೆ ತಟ್ಟಬಹುದಾದ ಅಭ್ಯರ್ಥಿಯನ್ನು ಬೆಂಬಲಿಸ್ತಾರೆ. ವಾರಾಣಾಸಿಯಲ್ಲಿ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಜೊತೆ ದೊಡ್ಡ ಮಟ್ಟದಲ್ಲಿ ಸ್ಥಳೀಯ ಮುಸ್ಲಿಮರು ಕಾಣಿಸಿಕೊಂಡಿದ್ದು ಇದಕ್ಕೆ ಸಣ್ಣ ಉದಾಹರಣೆ ಅಷ್ಟೇ. ಇನ್ನು ಶಿಯಾ ಸಮುದಾಯದ ಕೆಲವರು ಅಟಲ್ ಬಿಹಾರಿ ವಾಜಪೇಯಿ ಕಾಲದಿಂದಲೂ ಬಿ.ಜೆ.ಪಿ ಬೆಂಬಲಕ್ಕಿದ್ದಾರೆ. ಅದು ಅಪವಾದವೇ ಹೊರತು ನಿಯಮವಲ್ಲ..!
                   ಹಿಂಗಿದೆ ಉತ್ತರ ಪ್ರದೇಶದ ಸಧ್ಯದ ಪರಿಸ್ಥಿತಿ. ಇನ್ನೂ ಸರಳವಾಗಿ ಹೇಳಬೇಕು ಅಂದರೆ, ಇಲ್ಲಿ ಮೇಲ್ವರ್ಗದ ಹಿಂದೂ, ಇತರ ಹಿಂದುಳಿದ ವರ್ಗ, ದಲಿತ ಮತ್ತು ಮುಸ್ಲಿಂ ಅನ್ನೋ ನಾಲ್ಕು ಪ್ರಮುಖ ವರ್ಗಗಳಿವೆ. ಇವುಗಳ ಪೈಕಿ ಎರಡು ವರ್ಗಗಳ ಸಾಲಿಡ್ ಬೆಂಬಲ ಪಡೆದು ಮೂರನೇ ವರ್ಗದ ಮತಬ್ಯಾಂಕ್ನೊಳಕ್ಕೆ ಕೈ ಹಾಕಬಲ್ಲವನಿಗೆ ಗದ್ದುಗೆ ಒಲಿಯುತ್ತದೆ.

Friday, January 25, 2013


ªÀiÁzsÀåªÀÄUÀ¼À dªÁ¨ÁÝj £É£À¦¸ÀĪÀªÀjUÉÆAzÀÄ ªÀiÁvÀÄ...

                     UÀÄ®âUÀð¢AzÀ M§â ºÀÄqÀÄUÀ ¥sÉÆÃ£ï ªÀiÁrzÀÝ. JAf¤AiÀÄjAUï ¸ÀÆÖqÉAmï CAvÉ. C«£Á±ï CAvÉãÉÆà ºÉ¸ÀgÀÄ. ºÉÆvÀÛ®èzÀ ºÉÆwÛ£À°è ¥sÉÆÃ£ï ªÀiÁr vÁ£ÀÄ AiÀiÁgÀÄ, J°èAzÀ ªÀiÁvÁrÛgÉÆÃzÀÄ CAvÀ ºÉüÀzÉÃ, §Äå¹ E¢ÃgÁ, ¸Àé®à ªÀiÁvÀ£ÁqÀ§ºÀÄzÁ C£ÉÆßà ¥sÁªÀÄð¯ï ¥Àæ±Éß PÀÆqÀ PÉüÀzÉà £ÉÃgÀªÁV "¤ÃªÀÅ ¸ÀĪÀtð £ÀÆå¸ï£ÀªÀgÀÄ gÀZÀ£ÁvÀäPÀ PÁAiÀÄðPÀæªÀÄUÀ¼À£ÀÄß ªÀiÁqÀ¨ÉÃPÀÄ ¸Ágï, n.Dgï.¦UÁV PÁAiÀÄðPÀæªÀÄ ªÀiÁqÀ¨ÉÃr" C£ÉÆßà ¹zÀÞ¨sÁµÀt NzÀvÉÆqÀUÀÄvÁÛ£É.
                     n.Dgï.¦ - n.Dgï.¦ - n.Dgï.¦... ©Ã¢Ã° ºÉÆÃUÉÆà zÁ¸ÀAiÀÄå¤AzÀ »rzÀÄ - °PÀÌgï «Ä¤¸ÀÖgï gÉÃtÄPÁZÁAiÀÄð vÀ£ÀPÀ ¥ÀæwAiÉƧâgÀÆ ºÉüÉÆà ªÀiÁvÉà EzÀÄ. £ÀÆå¸ï ZÁ£É¯ï£ÀªÀgÀÄ n.Dgï.¦UÁV K£ÉãÉÆà ªÀiÁqÁÛgÉ CAvÀ. ºÀAUÉ ºÉüÉÆÃgÀÄ MAzÀÄ ¸À® §ÄzsÀªÁgÀ ¨É½UÉÎ AiÀiÁªÀÅzÁzÀgÀÆ £ÀÆå¸ï ZÁ£É¯ï D¦üùUÉ §gÀ¨ÉÃPÀÄ. DªÀvÀÄÛ n.Dgï.¦ §A¢gÀvÉÛ. PÉ®ªÀgÀÄ «ÄÃ¸É wgÀÄ«PÉÆAqÀÄ NqÁqÀÄwÛgÀÄvÁÛgÉ. E£ÀÄß PÉ®ªÀgÀÄ PɼÀUÉ ºÁQzÀ vÀ¯É ªÉÄïÉvÀÛzÉà ªÀÄƯÉAiÀÄ°è PÀĽwgÀÄvÁÛgÉ. ªÀÄvÉÛ PÉ®ªÀgÀÄ vÀªÀÄUÉ vÁªÉà ¸ÀªÀÄxÀð£É - ¸ÀªÀiÁzsÁ£À ºÉýPÉÆAqÀÄ CzÀ£Àß D¦üù£À »jvÀ¯ÉUÀ¼À vÀ£ÀPÀ vÀ®Ä¦¸ÉÆÃzÀPÉÌ ±ÀvÀ¥ÀæAiÀÄvÀß ªÀiÁrÛvÁðgÉ. §ÄzsÀªÁgÀ ¢£À £ÀÆå¸ï ZÁ£É¯ï £ËPÀgÀgÀ ªÀÄÆqÀÄUÀ¼À£Àß ¤zsÀðj¸ÉÆÃzÀÄ CªÀgÀªÀgÀÄ ªÀiÁrzÀ PÁAiÀÄðPÀæªÀÄUÀ½UÉ §AzÀ n.Dgï.¦.
                     £ÀÆå¸ï ¥ÉÃ¥ÀgÀÄ - n.« ZÁ£É¯ïUÀ½VgÀĪÀ ¨ÉùPï ªÀåvÁå¸ÀªÉà EzÀÄ. ¥ÀwæPÉUÀ½UÉ DgÀÄ wAUÀ½UÉƪÉÄä ¸ÀPÀÄåð¯ÉõÀ£ï UÉÆvÁÛUÀvÉÛ. AiÀiÁgÀÄ £ÀA§gï M£ï, AiÀiÁgÀÄ ªÉÃUÀªÁV ¨É¼ÉzÀgÀÄ, AiÀiÁgÀ£Àß AiÀiÁgÀÄ »A¢QÌzÀgÀÄ C£ÉÆßÃzÀgÀ ¯ÉPÁÌZÁgÀ w½AiÀÄvÉÛ. vÀ¯É vÀVθÀ¨ÉÃPÁzÀªÀgÀÄ vÀVι - ¨É£ÀÄß ZÀ¥Ààj¹PÉƼÀî¨ÉÃPÁzÀªÀgÀÄ ZÀ¥Ààj¹PÉÆAqÀÄ ¸ÀĪÀÄä£ÁUÁÛgÉ. ªÀÄvÉÛ DgÀÄ wAUÀ¼À PÁ® CªÀgÀ ¥ÁqÀÄ CªÀgÀzÀÄ. DzÀgÉ, £ÀÆå¸ï ZÁ£É¯ï£À°è CzÀÄ ¥Àæw ªÁgÀzÀ ¥ÀæQæAiÉÄ. (FUÀ ¥ÀgÀªÁV®è, ªÉÆzÀ®Ä ªÁgÀPÉÌgÀqÀÄ ¸À® §wðvÀÄÛ..!)
                    £ÀÆå¸ï ¥ÉÃ¥Àgï£À ¸ÀPÀÄåð¯ÉõÀ£ï C£ÉÆßÃzÀÄ Erà ¥ÀwæPÉAiÀÄ ¸ÁzsÀ£É. C°è AiÀiÁªÀ PÁ®A JµÀÄÖ d£À N¢zÀgÀÄ, AiÀiÁªÀ CAPÀtPÁgÀ ºÉZÀÄÑ d£ÀgÀ£Àß vÀ®Ä¦zÀ, AiÀiÁªÀwÛ£À ¥ÀwæPÉ vÀÄA§ N¢¹PÉÆArvÀÄ, AiÀiÁªÀwÛ£À PÁlÆð£À£Àß NzÀÄUÀgÀÄ vÀÄA§ ªÉÄaѹPÉÆArvÀÄ, AiÀiÁªÀ ¥ÀÄgÀªÀt ºÉZÀÄÑ d£À¦æAiÀÄ, HºÀÆÕA... EAxÀ AiÀiÁªÀ ¥Àæ±ÉßUÀ½UÀÆ GvÀÛgÀ E®è. DzÀgÉ, n.Dgï.¦ ºÀAUÀ®è. CzÀÄ ¥Àæw PÁAiÀÄðPÀæªÀÄzÀ ºÀuɧgÀºÀªÀ£ÀÆß ºÉý©qÀvÉÛ. AiÀiÁªÀ PÁAiÀÄðPÀæªÀĪÀ£Àß JµÀÄÖ d£À £ÉÆÃrzÀgÀÄ, £ÉÆÃrzÀªÀgÀ ¥ÉÊQ AiÀiÁªÀ ªÀAiÀĹì£ÀªÀgÀÄ JµÀÄÖ d£À, ²æêÀÄAvÀgÀÄ eÁ¹Û£ÉÆà - ªÀÄzsÀåªÀĪÀUÀðzÀªÀgÀÄ eÁ¹ÛãÉÆÃ. ¥ÀÆwðAiÀiÁV £ÉÆÃrzÀgÉÆÃ, CzsÀðPÉÌà ¨ÉÃgÉ ZÁ£É¯ïUÉ ²¥sïÖ DzÀgÉÆÃ. CzsÀð UÀAmÉAiÀÄ PÁAiÀÄðPÀæªÀĪÀ£Àß ¸ÀgÁ¸Àj JµÀÄÖ ¤«ÄµÀ £ÉÆÃrzÀgÀÄ, ¨ÉæÃPï£À°è JµÀÄÖ d£À ZÁ£É¯ï §zÀ°¹zÀgÀÄ, ¨ÉæÃPï ªÀÄÄVzÀ ªÉÄÃ¯É JµÀÄÖ d£À ªÀÄvÉÛ CzÉà PÁAiÀÄðPÀæªÀÄPÉÌ ªÁ¥À¸ï §AzÀgÀÄ, §gÀzÀªÀgÀÄ ¨ÉÃgÉ AiÀiÁªÀ ZÁ£É¯ï £ÉÆÃqÀvÉÆqÀVzÀgÀÄ, »ÃUÉ... K£ï ¨ÉÃPÀÄ ¤ªÀÄUÉ CzÀgÀ°è..? CzÀPÉÌà §ÄzsÀªÁgÀ ¨É½UÉÎ MAzÀÄ ¸À® £ÀÆå¸ï ZÁ£É¯ï D¦üùUÉ §AzÀÄ £ÉÆÃr CAzÀzÀÄÝ. ªÉÄʸÀÆj£À vÀ£ÀPÀ ºÉÆÃV ªÀÄ°èUÉ ¨É¼ÉzÀ gÉÊvÀ£À §ªÀuÉAiÀÄ §UÉÎ PÁAiÀÄðPÀæªÀÄ ªÀiÁrzÀªÀ£ÉzÀÄgÀÄ, AiÀÄÆ lÆå¨ï¤AzÀ L±ÀéAiÀÄð gÉÊ ¸ÉgÀUÀÄ eÁjzÀ «rAiÉÆà qË£ï¯ÉÆÃqï ªÀiÁrPÉÆAqÀÄ CzÀPÉÌ PÉA¥ÀÄ ¨ÁtzÀ UÀÄgÀÄvÀÄ ºÁQ ¥Àæ¸ÁgÀ ªÀiÁrzÀªÀ£ÀÄ «ÄÃ¸É wgÀÄ«PÉÆAqÀÄ NqÁqÀÄwÛgÀÄvÁÛ£É. PÁªÉÃj «ªÁzÀªÀ£Àß Cr¬ÄAzÀ ªÀÄÄrAiÀÄ vÀ£ÀPÀ C¨sÁå¸À ªÀiÁr UÀtågÀ£Àß PÀgɹPÉÆAqÀÄ MAzÀÄ UÀAmÉ ZÀZÉð ªÀiÁrzÀªÀ£ÉzÀÄgÀÄ n.Dgï.¦ »rzÀÄ "ºÉAUÉ..?" CAvÀ PÉüÀĪÀªÀ£ÀÄ ªÀÄÆgÀÄ d£À vÀ¯ÉªÀiÁ¹zÀ eÉÆåÃw¶UÀ¼À£Àß PÀgÀPÉÆAqÀÄ §AzÀÄ PÀÆj¹ AiÀÄrAiÀÄÆgÀ¥Àà£ÀªÀgÀ eÁvÀPÀzÀ ªÉÄÃ¯É MAzÀÄ UÀAmÉ ZÀZÉð ªÀiÁr¹gÀÄvÁÛ£É.

                   DªÀvÉÛà ªÀÄzsÁåºÀßzÀ «ÄÃnAUï£À°è PÀrªÉÄ n.Dgï.¦ vÀAzÀ PÁAiÀÄðPÀæªÀÄzÀ ¥ÉÆæqÀÆå¸ÀgÀÄ GvÀÛgÀ PÉÆqÀ¨ÉÃPÀÄ. CªÀ£ÉãÉÆà ºÉüÀ¨ÉÃPÀÄ C£ÀÄߪÀµÀÖgÀ°è, D ªÀÄƯÉAiÀÄ°è PÀĽvÀªÀ£ÉƧâ "D PÁAiÀÄðPÀæªÀÄ ªÀiÁqÉÆÃzÀÄ ¨ÉÃqÀ CAvÀ DªÀvÉÛà §qÀPÉÆAqÉ, £À£Àß ªÀiÁvÉ°è PÉýÛÃj" CAvÀ J®èjUÀÆ PÉüÉÆúÁUÉ UÉÆtUÁÛ£É. "PÁ£Éì¥ïÖ ZÀ£ÁßVzÉ, E£ÉßgÀqÀÄ ªÁgÀ £ÉÆÃr ¥sÉÊ£À¯ï r¹µÀ£ï vÀUÉƼÉÆîÃt" CAvÀ E£ÉÆߧâ CAvÁ£É. "n.Dgï.¦ §gÀ¢gÉÆà PÁAiÀÄðPÀæªÀÄPÉÌ CµÀÄÖ RZÀÄð ªÀiÁqÉÆÃzÀPÁÌUÀ®è, §eÉmï PÀrªÉÄ ªÀiÁrPÉƽî" CAvÁ£É CPËAmïì£ÀªÀ£ÀÄ. "D PÁAiÀÄðPÀæªÀÄPÉÌ eÁ»ÃgÁvÀÄ PÉÆr CAvÀ AiÀiÁgÀ£Àß PÉüÀt" C£ÉÆßÃzÀÄ ªÀiÁPÉðnAUï£ÀªÀgÀ ¥Áæ§èªÀÄÄä. CAxÀzÉÆÝAzÀÄ «ÄÃnAUï ªÀÄÄV¹ ºÉÆgÀUÉ §gÀĪÀµÀÖgÀ°è, D PÁ£Éì¦Ö£À ¸ÀºÀªÁ¸ÀªÉà ¸ÁPÀÄ C¤ß¹©nÖgÀvÉÛ.
                   CµÀÖgÀ°è, ªÀÄ»¼Á ¸ÀAWÀl£ÉAiÀĪÀjAzÀ ¥sÉÆãÀÄ, "E¯ÉÆè§â ªÉÆzÀ°£À E§âgÀÄ ºÉArjUÉ ªÉÆøÀ ªÀiÁr ªÀÄÆgÀ£ÉAiÀĪÀ¼À eÉÆvÉ ¸ÀA¸ÁgÀ ªÀiÁrÛzÀÝ ¸Ágï, FUÀ E§âgÀÆ ºÉAqÀwAiÀÄgÀ£Àß PÀgÀPÉÆAqÀÄ CªÀ£À ªÀÄ£ÉUÉ ºÉÆÃVۢë" CAvÀ. "ºÉÆrÃvÁgÉ CAzÉæ j¥ÉÆÃlðgï£À PÀ½¹Ûë" CAvÁ£É EªÀ£ÀÄ. CªÀgÀÄ ¨sÀgÀªÀ¸É PÉÆqÁÛgÉ. E°èAzÀ j¥ÉÆÃlðgÀÄ, £ÉÃgÀ¥Àæ¸ÁgÀPÉÌ N.© ªÁå£ÀÄ ºÉÆgÀqÀÄvÀÛªÉ. E§âgÀÆ ºÉAqÀA¢gÀÄ ¸ÉÃjPÉÆAqÀÄ D UÀAqÀ£À£Àß - DvÀ£À ªÀÄÆgÀ£Éà ºÉAqÀwAiÀÄ£Àß ºÉÆqÉzÀgÉ M¼ÉîAiÀÄzÀÄ, MzÀÝgÉ ªÀAqÀgï¥sÀįï, ZÀ¥Àà° ©Ã¹zÀgÉ CªÉÄÃfAUï, §mÉÖ ©aÑ©lÖgÀAvÀÆ £ÀyAUï ¯ÉÊPï zÁåmï. ¨ÉÃgÉ ZÁ£É¯ïUÀ¼ÀªÀjVAvÀ ¨ÉÃUÀ vÀ®Ä¥À¨ÉÃPÀÄ, C°è UÀAqÀ ºÉAqÀw QvÁÛrPÉƽÛzÀÝgÉ - E°è ZÁ£É¯ï ZÁ£É¯ïUÀ¼ÀªÀgÀÄ QvÁÛrPÉÆAqÀÄ D E§âgÀÆ ºÉArgÀ£Àß PÁgÀÄ ºÀwÛ¹PÉÆAqÀÄ ¸ÀÆÖrAiÉÆÃPÉÌ PÀgÀPÉÆAqÀÄ §gÀ¨ÉÃPÀÄ, eÉÆvÉUÉ ªÀÄ»¼Á ¸ÀAWÀl£ÉUÀ¼À MA¢§âgÀÄ.  ªÉÆøÀUÁgÀ UÀAqÀ£À£Àß C°èAzÀ¯Éà ¯ÉʪïUÉ PÀÆr¹PÉƼÀî¨ÉÃPÀÄ. JgÀqÀÄ UÀAmÉ ¤gÀAvÀgÀ ZÀZÉð ªÀiÁr ªÀÄÄV¸À¨ÉÃPÀÄ. CµÀÖgÀ°è ¨ÉÃgÉ ZÁ£É¯ï£ÀªÀgÀÄ £ÀªÀÄä D¦üù£ÉzÀÄgÀÄ §AzÀÄ ¤AwvÁðgÉ. £ÀªÀÄä°è ZÀZÉð ªÀÄÄVzÀ £ÀAvÀgÀªÁzÀgÀÆ ¸Àj, vÀªÀÄä°èUÉ D E§âgÀÄ ºÉArgÀ£Àß PÀgÀPÉÆAqÀÄ ºÉÆÃUÀ¨ÉÃPÀÄ CAvÀ. ºÁUÁzÉæ ¥ÉÆæÃUÁæA PÀAn£ÀÆå ªÀiÁqÀÄ... E£ÉßgÀqÀÄ vÁ¸ÀÄ ©qÀ¯ÉèÉÃqÀ. CAxÀzÉÆÝAzÀÄ PÁAiÀÄðPÀæªÀÄ ªÀiÁr ªÀÄÄV¹zÀ £ÀAvÀgÀ DvÀ CAzÀÄPÉƼÁÛ£É. §gÀ° ªÀÄÄA¢£À ªÁgÀzÀ n.Dgï.¦, EªÀjUɯÁè GvÀÛgÀ PÉÆrÛä CAvÀ. DvÀ£À ¤jÃPÉë ¸ÀļÁîVgÉÆâ®è.
                 MAzÀÄ ¥ÀwæPÉAiÀÄ°è M§â NzÀÄUÀ vÀ£ÀUÉ EµÀÖªÁUÀzÀ ¸ÀÄ¢ÝAiÀÄ£Àß ©lÄÖ EµÀÖªÁUÀĪÀ ¸ÀÄ¢ÝAiÀÄ PÀqÉUÉ ºÉÆÃUÁÛ£É. CzÀgÀ°è DvÀ£À ªÀåQÛvÀéPÉÌ, C©ügÀÄaUÉ, ¨ÉÃrPÉUÉ vÀPÀÌAxÀ ¸ÀgÀQzÉ. D NzÀÄUÀ¤UÉ Erà ¥ÀwæPÉAiÉÄà ¨ÉÃqÀ C¤ß¹zÀgÉ, ¨É½UÉÎ ¥ÉÃ¥Àgï ºÁPÀĪÀ ºÀÄqÀÄUÀ¤UÉ PÁAiÀÄÄÝ, £Á¼É¬ÄAzÀ F ¥ÀwæPÉ ¨ÉÃqÀ, D ¥ÉÃ¥Àgï ºÁPÀÄ CAvÀ ºÉüÀ¨ÉÃPÀÄ. CzÀÄ AiÀiÁªÁUÀ¯ÉÆÃ..? DzÀgÉ, n.« ºÁUÀ®è £ÉÆÃr. PÉÊAiÀÄ°è jªÉÆÃmï EgÀvÉÛ. §l£ï MwÛzÀgÉ ªÀÄÄVÃvÀÄ. §ÄzsÀªÁgÀzÀ «ÄÃnAUï£À°è MAzÀÄ ZÁ£É¯ï£ÀªÀgÀÄ vÀVθÁÛgÉ - E£ÉÆßAzÀÄ ZÁ£É¯ï£ÀªÀgÀÄ «ÄÃ¸É wgÀÄ«PÉƼÁÛgÉ. FUÀ ºÉý... AiÀiÁgÀ£Àß ¨ÉÊAiÀÄå¨ÉÃPÀÄ..?

                 vÀÄA§ N¢PÉÆArzÀÝ, ¸Á»wåPÀ »£É߯ÉAiÀÄ ªÀåQÛAiÉƧâgÀÄ MAzÀÄ ZÁ£É¯ï£À PÁAiÀÄðPÀæªÀÄ «¨sÁUÀPÉÌ ªÀÄÄRå¸ÀÜgɤ߹PÉÆArzÀÝgÀÄ. CªÀgÀ PÁ£Éì¥ïÖ ¥ÀæPÁgÀ vÀAiÀiÁgÁzÀ MAzÀÄ PÁAiÀÄðPÀæªÀÄPÉÌ n.Dgï.¦ §wð®è C£ÉÆßÃzÀÄ ªÀiÁå£ÉÃeïªÉÄAmï£ÀªÀjUÉ ¨ÉÃeÁgÀÄ vÀj¹vÀÄÛ. ªÀiÁvÁqÉÆÃzÀPÉÌ PÀgɹzÀgÀÄ. "J¯Áè PÁAiÀÄðPÀæªÀÄUÀ¼À£Àß n.Dgï.¦UÁV ªÀiÁqÉÆÃzÀPÁÌUÀ®è ¸Ágï... MAzÀÄ ªÀÄ£É JzÀÄjUÉ vÀļÀ¹ VqÀ EgÉÆÃzÀjAzÀ AiÀiÁªÀ ¯Á¨sÀªÀÇ E®è. DzÀgÉ, vÀļÀ¹ VqÀ D ªÀÄ£ÉUÉ ®PÀët. CzÉà jÃw vÀļÀ¹VqÀzÀAxÀ MAzÀµÀÄÖ PÁAiÀÄðPÀæªÀÄUÀ¼ÀÄ EgÀ¨ÉÃPÀÄ" CAzÀgÀAvÉ DvÀ. "£ÀÆgÀÄ PÉÆÃn §AqÀªÁ¼À ºÁQzÀÝgÉ ¸ÀAPÀl CxÀð DVÛvÀÄÛ ¤ªÀÄUÉ" CAzÀÄ CªÀgÀ£Àß ºÉÆgÀUÉ PÀ½¸À¯Á¬ÄvÀÄ. E§âgÀ ¥ÉÊQ AiÀiÁgÀÄ PÀgÉPÀÄÖ..?
                MAzÀÄ ¸ÁªÀiÁfPÀ PÀ¼ÀPÀ½AiÀÄ «µÀAiÀÄ JwÛPÉÆAqÀÄ, CzÀgÀ §UÉÎ DªÀÄƯÁUÀæ ¸ÀA±ÉÆÃzsÀ£É ªÀiÁr, ¸ÀA§AzsÀ¥ÀlÖ «µÀAiÀÄ vÀdÕgÀ£Àß ªÀiÁvÁr¹ ªÀiÁ»w vÀUÉÆAqÀÄ CªÀgÀ ¥ÉÊQ PÉ®ªÀgÀ£Àß ¸ÀÆÖrAiÉÆÃUÉ PÀgɹ MAzÀÄ CxÀð¥ÀÆtð ZÀZÉð £ÀqɸÀĪÀ n.« ªÀgÀ¢UÁgÀ£À CµÀÆÖ ¥ÀæAiÀÄvÀßPÉÌ E£ÉÆßAzÀÄ ZÁ£É¯ï£ÀªÀgÀÄ ¸ÉÊ¥sï C°SÁ£ï - PÀjãÁ PÀ¥ÀÆgïgÀ C¥sÉÃgï ªÀÄvÀÄÛ ªÀÄzÀĪÉAiÀÄ §UÉÎ ¸ÉàµÀ¯ï ¥ÉÆæÃUÁæA ¥Àæ¸ÁgÀ ªÀiÁr ZÀ¥Ààr PÀ®Äè J¼ÉzÀÄ©qÁÛgÉ. ¥sÉøï§ÄPï£À°è PÀªÉÄAlÄ ªÀiÁqÀĪÀ §Ä¢ÞfëUÀ½UÉ, ¥sÉÆÃ£ï ªÀiÁr gÀZÀ£ÁvÀäPÀ PÁAiÀÄðPÀæªÀÄUÀ¼À §UÉÎ ¨sÁµÀt ©VAiÀÄĪÀ ¢ÃqÀÄ ¥ÀArvÀjUÉ F «µÀAiÀÄ AiÀiÁªÀwÛUÉ CxÀð D¢ÃvÀÄ..?
                ¥ÀÄtå... UÀÄ®âUÀðzÀ D JAd¤AiÀÄjAUï «zÁåyð ¸ÀĪÀtð £ÀÆå¸ï£ÀªÀgÀ eÉÆvÉ "n.Dgï.¦UÁV PÁAiÀÄðPÀæªÀÄ ªÀiÁqÀ¨ÉÃr C£ÉÆßà ¨sÁµÀt ©VzÀ. EgÀĪÀ E£ÀÄß½zÀ LzÀÄ ZÁ£É¯ïUÀ¼À ¥ÉÊQ MAzÀÄ ¤¢ðµÀ× ZÁ£É¯ï£ÀªÀjUÉ ºÉýzÀÝgÉ, DvÀ£À£Àß ºÀÄqÀÄQPÉÆAqÀÄ UÀÄ®âUÀðPÉÌà ºÉÆÃVgÉÆÃgÀÄ. AiÀiÁPÀAzÉæ, D ZÁ£É¯ï£À°è ªÀÄÆgÀÄ wAUÀ½AzÀ ¸ÀA§¼À PÉÆnÖ®è. ªÀiÁå£ÉÃeïªÉÄAmï£ÀªÀgÀ£Àß PÉýzÀgÉ, "n.Dgï.¦ vÀÄA§ PÀrªÉÄ DVzÉ, eÁ»ÃgÁvÀÄ §wð®è, £ÀªÀÄUÉ zÀÄqÀÄØ §gÀ¢zÀÝgÉ ¸ÀA§¼À J°èAzÀ PÉÆqÉÆÃt" CAvÀ PÉýÛzÁgÀAvÉ.

                ¥Àæ§ÄzÀÞ «ÃPÀëPÀ ªÀUÀð C£ÉÆßÃzÀÄ MA¢gÀvÉÛ..!

                ¸ÀĪÀtð £ÀÆå¸ï K¶AiÀiÁ£Émï £ÀÆå¸ï ¥ÉæöʪÉÃmï °«ÄmÉqïUÉ ¸ÉÃjgÉÆÃzÀÄ C£ÉÆßà «µÀAiÀÄ vÀÄA§ d£ÀjUÉ UÉÆwÛzÉ. D K¶AiÀiÁ£Émï £ÀÆå¸ï ¥ÉæöʪÉÃmï °«ÄmÉqïUÉ PÉÃgÀ¼ÀzÀ°è MAzÀÄ ZÁ£É¯ï EzÉ. K¶AiÀiÁ£Émï £ÀÆå¸ï CAvÀ PÀgɹPÉƼÀîvÉÛ CzÀÄ. JgÀqÀÆ MAzÉà ªÀiÁvÀÈ ¸ÀA¸ÉÜAiÀÄ ZÁ£É¯ïUÀ¼ÁVgÉÆÃzÀjAzÀ C°è CvÀåAvÀ AiÀıÀ¹éAiÀiÁzÀ PÁAiÀÄðPÀæªÀÄzÀ PÁ£Éì¥ïÖUÀ¼À£Àß PÀ£ÀßqÀPÉÌ vÀAzÀÄ ¸ÀĪÀtð £ÀÆå¸ï£À°è ¥Àæ¸ÁgÀ ªÀiÁqÉÆÃzÀÄ CAvÁVvÀÄÛ. ªÉÆzÀ°UÉ DAiÉÄÌAiÀiÁzÀzÀÄÝ "ªÀĺÁ¥ÀvÀ£À" C£ÉÆßà PÁAiÀÄðPÀæªÀÄ. vÀÄA§ zÉÆqÀØ ªÀÄlÖzÀ°è AiÀıÀ¸ÀÄì ¥ÀqÉzÀÄ ¸ÀéAiÀÄAPÀÈvÁ¥ÀgÁzsÀ¢AzÀ¯ÉÆà - ¥Àj¹ÜwAiÀÄ Dl¢AzÀ¯ÉÆà £ÉÃ¥ÀxÀåPÉÌ ¸ÀjzÀĺÉÆÃzÀ ¥Àæ¹zÀÞgÀ §UÉV£À PÁAiÀÄðPÀæªÀÄ CzÀÄ. CzsÀð UÀAmÉAiÀÄ°è M§â ªÀåQÛAiÀÄ Erà ªÀåQÛvÀé PÀnÖPÉÆqÀ¨ÉÃPÀÄ. K¼ÀÄ - ©Ã¼ÀÄUÀ¼À §UÉÎ E£ï¸ÉÊqï ¸ÉÆÖÃj PÉÆqÀ¨ÉÃPÀÄ. PÉÃgÀ¼ÀzÀ°è ¸ÀÆ¥Àgï»mï DzÀ PÁAiÀÄðPÀæªÀÄ. CzÀ£Àß wæPÀgÀt ±ÀÄ¢Þ¬ÄAzÀ PÀ£ÀßqÀPÉÌ vÀA¢é. DzÀgÉ, ClÖgï ¥sÁè¥ÀÄ... "¤ÃªÀÅ eÉÆåÃw¶UÀ¼À£Àß PÀÆj¹PÉÆAqÀÄ ¥Àæ¼ÀAiÀÄ - eÁvÀPÀzÀ ZÀZÉð ªÀiÁrPÉÆArj, EAxÀªÀ£Éß®è ¤ªÀÄä d£À £ÉÆÃqÀ®è" CAvÀ ªÀåAUÀåzÀ ªÀiÁvÁrzÀgÀÄ ªÀįÉAiÀiÁ¼ÀA ZÁ£É¯ï£À d£À.

               PÉÃgÀ¼ÀzÀ AiÀiÁªÀÅzÉà ZÁ£É¯ï£À £ÉÆÃr. JAxÁ gÀZÀ£ÁvÀäPÀ PÁAiÀÄðPÀæªÀÄUÀ¼ÀÄ §gÀÄvÀÛªÉ. ¸ÀAeÉ ºÉÆwÛ£À ¥ÉæöʪÀiï mÉʪÀiï£À°è zÀ¥Àà PÀ£ÀßqÀPÀzÀ qsÁ¼À §tÚzÀ ZÀÆrzÁgï ºÁQPÉÆAqÀ ªÀÄzsÀåªÀAiÀĸÀÌ ºÉtÄÚªÀÄUÀ¼ÉƧâ¼ÀÄ £ÀÆå¸ï NzÀÄwÛzÀݼÀÄ MAzÀÄ ¢£À. "EzÉãÀAiÀiÁå »AUÉ" CAvÀ PÉÃgÀ¼ÀzÀ UɼÉAiÀÄ£ÉƧâ£À£Àß PÉýzÉ. "AiÀĸï, DPÉ £ÀªÀÄä gÁdåzÀ°è vÀÄA§ ¥Á¥ÀÄå®gï £ÀÆå¸ï DåAPÀgï. §ºÀ¼À N¢PÉÆArgÉÆÃgÀÄ, «ZÁgÀªÀAvÉ. dUÀwÛ£À DUÀĺÉÆÃUÀÄUÀ¼À §UÉÎ ¸ÀéAvÀ C©ü¥ÁæAiÀÄ ElÄÖPÉÆArgÉÆà ªÀÄ»¼É, ¤ªÀÄä°è vɼÀîUÉ ¨É¼ÀîUÉ EgÉÆÃgÀÄ £ÀÆå¸ï DåAPÀgï DUÁÛgÉ. £ÀªÀÄä°è §Ä¢Þ - eÁuÉä EgÉÆÃgÀÄ DUÁÛgÉ" CAzÀ DvÀ. CzÉà mÉʪÀiïUÉ ¥sÉøï§ÄPï£À°è PÉ®ªÀÅ £ÀÆå¸ï DåAPÀgïUÀ¼À ¥sÉÆÃmÉÆ ºÁQzÀ AiÀiÁgÉÆà M§âgÀÄ EªÀgÀ ¥ÉÊQ Cw ºÉZÀÄÑ UÁèªÀÄgÀ¸ï DVgÉÆÃgÀÄ AiÀiÁgÀÄ CAvÀ MAzÀÄ ¥ÉÆÃ¯ï £ÀqɸÀÄwÛzÀÝgÀÄ. 
               ºÀAUÁzÀgÉ £ÀªÀÄä°è ¥Àæ§ÄzÀÞ «ÃPÀëPÀgÉà E®èªÁ..? RArvÁ EzÁgÉ. CªÀgÉÆAxÀgÁ ¥ÀæeÁÕªÀAvÀ £ÁUÀjzÀÝAvÉ. ¥ÀæeÁ¥Àæ¨sÀÄvÀézÀ ªÀĺÀvÀézÀ §UÉÎ, ºÉZÀÄÑwÛgÀĪÀ ¨sÀæµÁÖZÁgÀ - ªÀA±À¥ÁgÀA¥ÀAiÀÄð gÁdQÃAiÀÄ J®èzÀgÀ §UÉÎAiÀÄÆ ªÀiÁvÀ£ÁqÀÄvÁÛgÉ. CªÀgÉà J¯ÉPÀë£ï ¢£À næ¥ïUÉ ºÉÆÃUÉÆÃgÀÄ. NlÄ ºÁQ gÁdPÁgÀtÂUÀ¼À£Àß Dj¸ÉÆÃgÀÄ ªÀÄvÀÛzÉà C£ÀPÀëgÀ¸ÀÜ ªÀÄvÀzÁgÀ. PÀ£ÀßqÀ £ÀÆå¸ï ZÁ£É¯ïUÀ¼À°è ¥Àæ¸ÁgÀªÁUÀĪÀ PÉlÖ PÁAiÀÄðPÀæªÀÄUÀ¼À §UÉÎ ¥sÉøï§ÄPï£À°è NvÀ¥ÉÆæÃvÀªÁV PÀªÉÄAmï §gÉAiÉÆà d£À ¥Àæ¸ÁgÀªÁzÀ MAzÀÄ M¼ÉîAiÀÄ PÁAiÀÄðPÀæªÀÄzÀ §UÉÎ MAzÀÄ M¼ÉîAiÀÄ ªÀiÁvÀÄ §gÉzÀzÀÄÝ £ÉÆÃr®è. §gÉAiÉÆÃzÀPÉÌ CzÀ£ÀߪÀgÀÄ £ÉÆÃrgÉÆâ®è.
               £ÀÆå¸ï ZÁ£É¯ïUÀ¼À ¸ÀzÀ©ügÀÄaAiÀÄ PÁAiÀÄðPÀæªÀÄ ¥Àæ¸ÁgÀ ªÀiÁrÛ®è CAvÀ C£ÉÆßÃgÉzÀÄjUÉ AiÀiÁªÁåªÀ PÁAiÀÄðPÀæªÀÄPÉÌ JµÉÖµÀÄÖ n.Dgï.¦ §A¢zÉ C£ÉÆßÃzÀgÀ ¯ÉPÀÌ PÉÆqÀ¯Á..? PÉæöÊA PÁAiÀÄðPÀæªÀÄzÀ°è ªÀÄUÀ£À£Àß PÀ¼ÀPÉÆAqÀ C¸ÀºÁAiÀÄPÀ vÁ¬ÄAiÀÄ C¼À°£À PÀxÉ ºÉýzÀgÉ JµÀÄÖ d£À £ÉÆÃqÁÛgÉ - «Ä¤ ¸ÀÌmïð ºÁQPÉÆAqÀ ºÀÄqÀÄVAiÀÄgÀÄ gÉÃªï ¥ÁnðAiÀÄ°è ¹QÌ©zÀÝ PÀxÉ ºÉýzÀgÉ JµÀÄÖ d£À £ÉÆÃqÁÛgÉ C£ÉÆßÃzÀgÀ ¯ÉPÀÌ PÉÆqÀ¯Á..? vÀÄA§ d£À¥ÀgÀªÁzÀ PÁAiÀÄðPÀæªÀĪÉÇAzÀÄ ¸ÉÖà D£ï C£ÉÆßà ¯ÉÊAVPÀ ±ÀQÛ ªÀÈ¢Þ¸ÀĪÀ ªÀiÁvÉæAiÀÄ ºÀ¢£ÉÊzÀÄ ¤«ÄµÀzÀ eÁ»ÃgÁwVAvÀ PÀrªÉÄ n.Dgï.¦ ¥ÀqÉzÀ GzÁºÀgÀuÉ PÉÆqÀ¯Á..? ¤©gÀÄ C£ÉÆßà UÀȺÀ §AzÀÄ C¥Àཹ ¥Àæ¼ÀAiÀÄ DUÀvÁÛ JA§ÄzÀgÀ §UÉV£À PÁAiÀÄðPÀæªÀÄzÀ°è «eÁÕ¤UÀ¼ÀÄ £ÀqɹzÀ ZÀZÉð, eÉÆåÃw¶UÀ¼ÀÄ £ÀqɹzÀ ZÀZÉð JzÀÄgÀÄ ºÉÃUÉ ¥ÉîªÀªÁ¬ÄvÀÄ C£ÉÆßÃzÀ£Àß ©r¹ ºÉüÀ¯Á..? "dªÁ¨ÁÝj d£Àð°¸ÀA C£ÉÆßà vÀ¯É§gÀºÀzÀrAiÀÄ°è ¸ÁªÀiÁfPÀ PÀ¼ÀPÀ½AiÀÄ «µÀAiÀÄUÀ¼À §UÉÎ eÁUÀÈw ªÀÄÆr¸ÀĪÀ PÁAiÀÄðPÀæªÀÄ ªÀiÁrzÀgÉ JµÀÄÖ d£À £ÉÆÃqÁÛgÉ UÉÆvÁÛ..? EzÀ£Éß®è ºÉýzÀ £ÀAvÀgÀ, "ºÁUÁzÀgÉ, §Æè ¦ü®A ºÁQ©r, n.Dgï.¦ ZÀ£ÁßV §gÀ§ºÀÄzÀÄ" CAvÀ C£ÉÆßÃgÀÆ EzÁgÉ. CªÀgÀ eÉÆvÉ ZÀað¸ÀĪÀµÀÄÖ ¹°è «µÀAiÀÄ EzÀ®è, PÀë«Ä¹... 
               ¥Àæ§ÄzÀÞ «ÄÃrAiÀiÁ §UÉÎ J®ègÀÆ ªÀiÁvÁqÁÛgÉ. DzÀgÉ, ¥Àæ§ÄzÀÞ «ÃPÀëPÀgÀ §UÉÎ ZÀZÉð DUÉÆÃzÉà E®èªÀ®è AiÀiÁPÉ..? £ÀªÀÄä°è ªÀiÁqÉÆà ºÁUÉ PÉÃgÀ¼ÀzÀ £ÀÆå¸ï ZÁ£É¯ïUÀ¼À°è dUÀ¼ÁrPÉÆAqÀ UÀAqÀ - ºÉAqÀwAiÀÄ£Àß ¸ÀÆÖrAiÉÆÃPÉÌ PÀgÀPÉÆAqÀÄ §AzÀÄ ZÀZÉð ªÀiÁqÁÛgÁ..? gÁdPÁgÀtÂUÀ¼À eÁvÀPÀUÀ¼À¤ßlÄÖPÉÆAqÀÄ AiÀiÁjUÉ ¸ÁqÉøÁw ±ÀÄgÀĪÁVzÉ C£ÉÆßÃzÀgÀ §UÉÎ vÀªÀqÀÄ PÀÄmÁÛgÁ..? vÉÆÃj¹ £ÉÆÃqÉÆÃt. AiÀiÁPÀAzÉæ, C°è£À d£ÀjUÉ CªÉ®è ¹°è C¤ß¸ÀvÉÛ. £ÉÆÃqÀ®è. n.Dgï.¦ §gÀ®è. EzÀÄ, £ÀªÀÄä «ÃPÀëPÀjUÀÆ - UÁèªÀÄgÀ¸ï £ÀÆå¸ï DåAPÀgïUÀ½UÀÆ PÀ¹«¹AiÀÄ «µÀAiÀÄ C¤ß¸À§ºÀÄzÀÄ. DzÀgÉ, ¸ÀvÀå C®èªÁ..?


»ÃUÉÆAzÀÄ ¸ÀÄAzÀgÀ ¥ÀjPÀ®à£É

               ¸ÁªÀiÁfPÀ vÁtUÀ¼À°è £ÀÆå¸ï ZÁ£É¯ïUÀ¼À ¨ÉÃdªÁ¨ÁÝjvÀ£ÀzÀ §UÉÎ NvÀ¥ÉÆæÃvÀªÁV §gÉAiÀÄÄwÛgÀĪÀªÀgÀ JzÀÄgÀÄ ¸ÀĪÀÄä£É MAzÀÄ ¥Àæ¥ÉÆøÀ®Äè. J®ègÀÆ ¸ÉÃj zsÀªÀiÁðxÀð PÁAiÀÄðPÁÌV £ÀÆgÀÄ PÉÆÃn (AiÀĸï, £ÀÆgÀÄ PÉÆÃn..!) «¤AiÉÆÃV¸À§®è DUÀ¨sÀð ²æêÀÄAvÀ ¥ÀÄuÁåvÀägÉƧâgÀ£Àß ºÀÄqÀÄPÉÆÃt. MAzÀÄ £ÀÆå¸ï ZÁ£É¯ï ºÉÃVgÀ¨ÉÃPÀÄ, JAxÀ £ÀÆå¸ï PÉÆqÀ¨ÉÃPÀÄ JA§ÄzÀgÀ §UÉÎ EµÉÆÖAzÀÄ w½zÀÄPÉÆArgÀĪÀ ¤ÃªÉà ¸ÁPÀÄ, ¨ÉÃgÉ ¥ÀvÀæPÀvÀðgÀ ¸ÀºÀªÁ¸À ¨ÉÃqÀ. EAxÀzÉÆÝAzÀÄ ¸ÁªÀiÁfPÀ ¸ÉêÉUÁV ¤ÃªÀÅ ¸ÀA§¼À PÉüÀ®è C£ÉÆßà UÁågÀAn EzÉ. E£ÀÄß CzɵÉÖà f¥ÀÄtvÀ£À¢AzÀ MAzÀÄ £ÀÆå¸ï ZÁ£É¯ï £ÀqɹzÀgÀÆ wAUÀ½UÉ MAzÀƪÀgÉ PÉÆÃn ºÀt ¨ÉÃPÀÄ. CzÀ£Àß §AqÀªÁ¼À ºÁQzÀ ¥ÀÄuÁåvÀäjAzÀ¯Éà ¥ÀqÉzÀgÁ¬ÄvÀÄ. E£ÀÄß PÁågÉÃeï ¦üà CAvÀ MAzÀÄ ªÀµÀðPÉÌ ºÉZÀÆÑ PÀrªÉÄ ºÀvÀÄÛ PÉÆÃn gÀÄ¥Á¬ÄUÀ¼À£Àß PÉç¯ï D¥ÀgÉÃlgïUÀ½UÉ PÉÆqÀ¨ÉÃPÀÄ. £ÀÆgÀÄ PÉÆÃn §AqÀªÁ¼À ºÁQzÀ, wAUÀ½UÉ MAzÀƪÀgÉ PÉÆÃn gÀÄ¥Á¬ÄUÀ¼À£Àß zsÀªÀiÁðxÀð PÁAiÀÄðPÉÌ «¤AiÉÆÃV¸ÀĪÀ ¥ÀÄuÁåvÀägÀÄ D ºÀvÀÄÛ PÉÆÃn PÉÆqÀ®è CAzÁgÉAiÉÄÃ..?
              ºÁUÉ MAzÀÄ £ÀÆå¸ï ZÁ£É¯ï ªÀiÁqÉÆÃt. G½zÀ ¨ÉÃdªÁ¨ÁÝj ZÁ£É¯ïUÀ¼ÀÄ K£ÁzÀgÀÆ ºÁQPÉÆAqÀÄ ºÁ¼ÁV ºÉÆÃUÀ°. £ÁªÀÅ ªÀiÁvÀæ ¸ÀªÀiÁdªÀÄÄT PÁAiÀÄðPÀæªÀÄUÀ¼À£Àß ªÀiÁvÀæ ¥Àæ¸ÁgÀ ªÀiÁqÉÆÃt. n.Dgï.¦ §gÀ¢zÀÝgÉ PÀvÉÛ ¨Á®. PÀvÉÛ ¨Á®..? CgÉ, n.Dgï.¦ §A¢®è CAzÀgÉ d£À £ÉÆÃr®è CAvÀ CxÀð. d£À £ÉÆÃr®è CAzÀªÉÄÃ¯É AiÀiÁªÀ ¥ÀÄgÀĵÁxÀð ¸ÁzsÀ£É D¬ÄvÀÄ..? CzÉ®èzÀgÀ ZÀZÉð ¨ÉÃqÀ. CAxÀzÉÆÝAzÀÄ ZÁ£É¯ï DUÀ°. ¥sÉøï§ÄPï «ÃgÀgÀ ¥ÉÊQ F ¥ÁæeÉPïÖ£À £ÉÃvÀÈvÀé ªÀ»¹PÉƼÀÄîªÀªÀgÀÄ AiÀiÁgÀÄ..?   


MAzÀÄ ¨Élgï D¥Àë£ï EzÉ..!

               £ÀÆå¸ï ZÁ£É¯ïUÀ¼À°è ¸ÀªÀiÁdªÀÄÄT PÁAiÀÄðPÀæªÀÄUÀ¼ÀÄ ¥Àæ¸ÁgÀ DUÀÄvÀÛ¯Éà E®èªÉÃ..? E®è CAvÀ zsÉÊAiÀÄðªÁV ºÉüÀĪÀªÀjUÉ ¸Á®Ä ¸Á®Ä GzÁºÀgÀuÉ PÉÆlÄÖ ¨Á¬Ä ªÀÄÄaѸÀ§ºÀÄzÀÄ. CAxÀ PÉ®ªÀÅ PÁAiÀÄðPÀæªÀÄUÀ¼À£Àß vÀ¥ÀàzÉà £ÉÆÃr. ¨É£ÀÄßvÀnÖ ±À¨sÁ±ï C¤ß. vÀ¥ÀÄà PÁt¹zÀgÉ EAxÀzÀÝ£Àß ¸Àj ªÀiÁrPÉƽî CAvÀ¤ß. CªÀ£Àß ªÀiÁrzÀªÀjUÉ ºÀĪÀÄä¸ÀÄì §gÀvÉÛ. PÉlÖ PÁAiÀÄðPÀæªÀÄUÀ¼ÀÄ §gÀÄwÛzÀÝgÉ, EAxÁ ZÁ£É¯ï£À°è EAxÁ PÉlÖ PÁAiÀÄðPÀæªÀÄ EµÉÆÖwÛUÉ §gÀÄvÀÛzÉ, CzÀ£Àß zÀAiÀÄ«lÄÖ £ÉÆÃqÀ¨ÉÃr CAvÀ MAzÀÄ PÁåA¥ÉÃ£ï ªÀiÁr. gÀZÀ£ÁvÀäPÀ PÁAiÀÄðPÀæªÀÄUÀ½UÉ MAzÀµÀÄÖ n.Dgï.¦ §gÀ°. PÉlÖ PÁAiÀÄðPÀæªÀÄUÀ¼ÀÄ ¥ÉÊ¥ÉÆÃnAiÀÄ°è ¸ÉÆî°. MAzÀÄ eÁUÀÈvÀ «ÃPÀëPÀ ªÀUÀð ºÀÄnÖPÉƼÉÆîÃzÀPÉÌ EzÉÆAzÉà ¸ÀzsÀåQÌgÀĪÀ zÁj.
               CzÀ£Àß ©lÄÖ J®ègÀ eÉÆvÉUÉ £ÀAzÀÆ MAzÀÄ PÀ®Äè C£ÉÆßà ºÁUÉ, D ZÁ£É¯ïUÉ ¸ÁªÀiÁfPÀ dªÁ¨ÁÝj E®è - F ZÁ£É¯ï ºÁ¼ÁV ºÉÆÃVzÉ. CzÀgÀ ªÀÄÄRå¸ÀÜ CªÀjAzÀ zÀÄqÀÄØ wAzÀ£Á..? F ªÀgÀ¢UÁgÀ¤UÉ JµÀÄÖ ºÉÆìÄvÀÄ..? CAvÀ ¨Á¬ÄUÉ §AzÀAvÉ ªÀiÁvÁqÀÄwÛzÀÝgÉ PÉý¹PÉƼÀÄîªÀµÀÄÖ vÁ¼ÉäAiÀiÁUÀ° - GvÀÛj¸ÀĪÀ ¸ÀºÀ£ÉAiÀiÁUÀ° AiÀiÁgÉƧâjUÀÆ EgÀĪÀÅ¢®è.


EµÀÖPÀÆÌ n.Dgï.¦ CAzÀgÉ K£ÀÄ UÉÆvÁÛ..?

                 ¸ÀĪÀÄä£É ¯ÁAUï¥sÁªÀiïð ºÉüÀ¨ÉÃPÀÄ CAzÀgÉ, CzÀÄ mÉ°«µÀ£ï gÉÃnAUï ¥Á¬ÄAmï. ¤Ã®ì£ï CAqï PÉAmÁgï «ÄÃrAiÀiÁ C£ÉÆßà CªÉÄÃjPÀ ªÀÄÆ®zÀ PÀA¥À¤ £ÀqɸÀĪÀ ¸ÀªÉÃð CzÀÄ. gÁdåzÀ PÉ®ªÀÅ £ÀUÀgÀUÀ¼À£Áßj¹PÉÆAqÀÄ C°è PÉ®ªÀÅ ªÀÄ£ÉUÀ¼À£Àß UÀÄgÀÄw¹ CªÀÅUÀ¼À°è ¦Ã¥À¯ï «ÄÃlgï CAvÀ PÀgÉAiÀįÁUÀĪÀ AiÀÄAvÀæUÀ¼À£Àß EqÀÄvÁÛgÉ. ºÁUÉ Dj¹PÉÆAqÀ ªÀÄ£ÉUÀ¼ÀªÀgÀ£Àß CªÀgÀªÀgÀ DyðPÀ ¹ÜwAiÀÄ DzsÁgÀzÀ ªÉÄÃ¯É ªÀÄÆgÀÄ «¨sÁUÀUÀ¼À£Àß ªÀiÁqÁÛgÉ. D ªÀÄ£ÉAiÀĪÀgÀÄ JµÉÆÖwÛUÉ AiÀiÁªÁåªÀ ZÁ£É¯ï £ÉÆÃrzÀgÀÄ, JµÀÄÖ d£À PÀĽvÀÄ £ÉÆÃrzÀgÀÄ C£ÉÆßà ¯ÉPÁÌZÁgÀªÀ£Àß ¦Ã¥À¯ï «ÄÃlgï zÁR°¹PÉÆArgÀvÉÛ. CAxÀ J¯Áè ¦Ã¥À¯ï «ÄÃlgïUÀ¼À CAQ ¸ÀASÉåUÀ¼À£Àß ªÁgÀPÉÆÌAzÀÄ ¸À® ¸ÉÃj¹ mÉ°«µÀ£ï gÉÃnAUï ¥Á¬ÄAmï PÉÆqÀ¯ÁUÀvÉÛ.

                ºÁUÁzÀgÉ JµÀÄÖ ¦Ã¥À¯ï «ÄÃlgïUÀ¼À£Àß ºÁPÀ¯ÁVzÉ..? AiÀiÁªÁåªÀ HgÀÄUÀ¼À°è ºÁPÀ¯ÁVzÉ..? AiÀiÁgÀ ªÀÄ£ÉUÀ¼À°è ºÁPÀ¯ÁVzÉ..? UÉÆwÛ®è. F ªÀiÁ»wUÀ¼À£Àß MAzÀÄ ZÁ£É¯ï PÀAqÀÄ»rAiÀÄ®Ä ¥ÀæAiÀÄwß¹zÀgÉ CzÀÄ CPÀëªÀÄå C¥ÀgÁzsÀ C¤ß¹PÉƼÀîvÉÛ. MAzÀÄ CAzÁf£À ¥ÀæPÁgÀ PÀ£ÁðlPÀzÀ°è£À CµÀÆÖ ¦Ã¥À¯ï «ÄÃlgïUÀ¼À ¸ÀASÉå ºÀ®ªÀÅ £ÀÆgÀÄUÀ¼À°èzÉ. ¨ÉAUÀ¼ÀÆgÀÄ ¸ÉÃjzÀAvÉ MA¨sÀvÀÄÛ HgÀÄUÀ¼À°è ºÁPÀ¯ÁVzÉ.
               ºÁUÁzÀgÉ, PÉ®ªÀÅ £ÀÆgÀÄ ªÀÄ£ÉUÀ¼À ¸ÉÃjPÉÆAqÀÄ EµÀÄÖ ZÁ£É¯ïUÀ¼À ºÀuɧgÀºÀ ¤zsÀðj¸ÀĪÀÅzÀÄ ¸ÀjãÁ..? PÉêÀ® MA¨sÀvÀÄÛ £ÀUÀgÀUÀ¼À d£ÀgÉà EAxÀzÉÆÝAzÀÄ wêÀiÁð£À vÉUÉzÀÄPÉƼÀÀÄzÁ..? UÉÆwÛ®è. £ÀªÀÄä gÁdåzÀ°è §ºÀĸÀASÉåAiÀÄ d£À gÉÊvÀgÀÄ. ºÁUÁzÀgÉ gÉÊvÀjUÁV MAzÀÄ PÁAiÀÄðPÀæªÀÄ ªÀiÁrzÀgÉ AiÀıÀ¹éAiÀiÁUÀ§ºÀÄzÀ®èªÁ..? ¸ÁzsÀå E®è. AiÀiÁPÀAzÉæ, gÉÊvÀjgÉÆÃzÀÄ ºÀ½îUÀ¼À°è. AiÀiÁªÀ ºÀ½îAiÀÄ®Æè ¦Ã¥À¯ï «ÄÃlgï E®è. ºÁUÁzÀgÉ, F ¸ÀªÉÃð vÀ¥Àà®èªÁ..? RArvÁ ºËzÀÄ. DzÀgÉ, n.« PÁAiÀÄðPÀæªÀÄUÀ¼À d£À¦æAiÀÄvÉAiÀÄ£Àß PÀAqÀÄPÉƼÉÆîÃzÀPÉÌ n.Dgï.¦ ©lÖgÉ ¨ÉÃgÉ zÁjAiÉÄà E®è. eÁ»ÃgÁvÀÄ ¸ÀA¸ÉÜUÀ¼ÀªÀgÀÄ D n.Dgï.¦ DzsÁgÀzÀ ªÉÄïÉAiÉÄà AiÀiÁªÁåªÀ ZÁ£É¯ïUÉ, D ZÁ£É¯ï£À AiÀiÁªÀ PÁAiÀÄðPÀæªÀÄPÉÌ JµÀÄÖ eÁ»ÃgÁvÀÄ PÉÆqÀ¨ÉÃPÀÄ C£ÉÆßÃzÀ£Àß ¤zsÀðj¸ÀÄvÁÛgÉ. CzÉà n.Dgï.¦ DzsÁgÀzÀ ªÉÄïÉAiÉÄà ZÁ£É¯ïUÀ¼ÀªÀgÀÄ vÀªÀÄä eÁ»ÃgÁvÀÄ ¨É¯ÉAiÀÄ£Àß ¤zsÀðj¸ÀÄvÁÛgÉ. MnÖ£À°è ZÀ£ÁßV n.Dgï.¦ §AzÀgÉ C£Àß, E®è¢zÀÝgÉ G¥ÀªÁ¸À C£ÉÆßà ¹Üw. n.Dgï.¦UÁV ZÁ£É¯ï£ÀªÀgÀÄ ¥ÉÆæÃUÁæA ªÀiÁqÀ¨ÁgÀzÀÄ CAvÀ ¥sÉøï§ÄPï£À°è C©ü¥ÁæAiÀÄ ªÀåPÀÛ¥Àr¸ÀĪÀ d£ÀjUÉ K£ï ºÉüÀ¨ÉÃPÀÄ..?
              EµÉÖ¯Áè ºÉýzÀ £ÀAvÀgÀ PÀÆqÀ, ¥Àæw ZÁ£É¯ï£À°è n.Dgï.¦ ¯ÉPÁÌZÁgÀUÀ¼À£Àß §¢VlÄÖ MAzÀµÀÄÖ gÀZÀ£ÁvÀäPÀ PÁAiÀÄðPÀæªÀÄUÀ¼ÀÄ §gÀ¨ÉÃPÀÄ C£ÉÆßÃzÀgÀ°è JgÀqÀÄ ªÀiÁw®è. CAxÀ PÁAiÀÄðPÀæªÀÄUÀ¼À §UÉÎ £Á®ÄÌ d£À M¼ÉîAiÀÄ ªÀiÁvÁzÀgÀÆ DrzÀgÉ ªÀiÁqÀĪÀªÀjUÉ GvÁìºÀ §A¢ÃvÉãÉÆÃ. 

Friday, May 18, 2012

ಸದ್ದಿಲ್ಲದೇ ಕುಬೇರನಾದನಲ್ಲ ಸೋನಿಯಾ ಅಳಿಯ..!



                                    ಗೆಳೆಯ ಪ್ರೇಮ್, facebookಲ್ಲಿ ಒಂದು ವಿಡಿಯೋ ಕಳಿಸಿದ್ರು. ಸೋನಿಯಾ ಗಾಂಧಿ ಅಳಿಯ, ಪ್ರಿಯಾಂಕಾ ಗಾಂಧಿ ಗಂಡ ರಾಬರ್ಟ್  ವದ್ರಾ ಅಲಿಯಾಸ್ ರಾಬರ್ಟ್ ವಡೇರಾ ಅಧೆಂಗೆ ಹತ್ತೇ ಹತ್ತು ವರ್ಷಗಳಲ್ಲಿ ಸಾವಿರಾರು ಕೋಟಿಯ ಒಡೆಯನಾಗಿಬಿಟ್ಟರು ಅನ್ನೋದನ್ನ ವಿವರಿಸುವ ವಿಡಿಯೋ ಅದು. ಅದನ್ನ ಭಾರತದಲ್ಲಿ ನಿಷೇಧಿಸಲಾಗಿದೆ. ಇಂಟರ್ನೆಟನಲ್ಲಿ ವಿಡಿಯೋಗಳ ಅತಿ ದೊಡ್ಡ ಗ್ಯಾಲರಿ ಅನ್ನಿಸಿಸಿಕೊಂಡಿರೋ youtube website ಕಳೆದ ವರ್ಷ ಒಟ್ಟು 12,426 ವಿಡಿಯೋಗಳನ್ನ ಭಾರತದಲ್ಲಿ ನಿಷೇಧಿಸಿದೆಯಂತೆ. ಅವುಗಳ ಪೈಕಿ 12,213 ವಿಡಿಯೋಗಳು ಸೋನಿಯಾ ಗಾಂಧಿಯ ವಿರುದ್ಧ ಇದ್ದವು ಅನ್ನೋ ಮಾಹಿತಿ ಇದೆ. ಅದೆಷ್ಟು ನಿಜಾನೋ ಗೊತ್ತಿಲ್ಲ. ಆದ್ರೆ, ಇದೇನ್ರೀ ಇದೂ ರಾಬರ್ಟ್ ವದ್ರಾ ಕಥೆ..? 1997ರ ತನಕ ಗುಜರಿ ವ್ಯಾಪಾರ ಮಾಡಿಕೊಂಡಿದ್ದ ಆ ಮನುಷ್ಯನನ್ನ ಇವತ್ತು ಭಾರತದ ಕಾರ್ಪೊರೇಟ್ ಜಗತ್ತು "ಅತಿ ವೇಗವಾಗಿ ಕೋಟ್ಯಾಧೀಶನಾದ ವ್ಯಾಪಾರಿ" ಅನ್ನುತ್ತಿದೆ. ಟಾಟಾಗಳು ಸಾವಿರ ಕೋಟಿಯ ಸರದಾರರಾಗಲು ನೂರು ವರ್ಷ ತಗೊಂಡರು. ಧೀರೂಬಾಯಿ ಅಂಬಾನಿಯವರದ್ದು ಅದೇನೇ ವೇಗದ ಬೆಳವಣಿಗೆ ಅಂದರೂ ಅದು ಐವತ್ತು ವರ್ಷಗಳ ಶ್ರಮ. ಆದರೆ, ರಾಬರ್ಟ್ ಇವತ್ತಿಗಾಗಲೇ ಎರಡು ಸಾವಿರದ ನೂರು ಕೋಟಿಗೆ ಬಾಳೋ ಮನುಷ್ಯ ಅನ್ನೋ ಅಂದಾಜು ಇದೆ. ಮದುವೆ ಅನ್ನೋದು ಒಬ್ಬ ಮನುಷ್ಯನ ನಸೀಬನ್ನ ಈ ಪರಿ ತೆರೆದುಬಿಡತ್ತಾ..?



                                                                   ಗುಜರಿ ಅಂಗಡಿಯವನು..!



                                   ಉತ್ತರ ಪ್ರದೇಶದ ಮುರಾದಾಬಾದ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಹಿತ್ತಾಳೆ ಮತ್ತು ಕಟ್ಟಿಗೆಯ ಕರಕುಶಲ ವಸ್ತುಗಳ ವ್ಯಾಪಾರ ಮಾಡಿಕೊಂಡಿದ್ದ ರಾಜಿಂದರ್ ವದ್ರಾ ಮತ್ತು ಆತನ ಸ್ಕಾಟ್ಲ್ಯಾಂಡ್ ಮೂಲದ ಕ್ರಿಶ್ಚಿಯನ್ ಹೆಂಡತಿ ಮೌರೀನ್ ರ ಮೂರು ಮಕ್ಕಳ ಪೈಕಿ ಹಿರಿಯವನು ಈತ. ಕೆಲವು ಕಾಲ ರಾಬರ್ಟ್ ವದ್ರಾ ಗುಜರಿ ವಸ್ತುಗಳ wholesale ವ್ಯಾಪಾರ ಮಾಡಿಕೊಂಡಿದ್ದ, ಕೃತಕ ಆಭರಣಗಳ ರಫ್ತು ವ್ಯವಹಾರ ಮಾಡ್ತಿದ್ದ ಅಂತಾರೆ. ಆದರೆ 1997ರಲ್ಲಿ ಯಾರೋ ಫ್ರೆಂಡ್ ಮನೇಲಿ ಪ್ರಿಯಾಂಕಾ ಗಾಂಧಿ ಪರಿಚಯವಾಗಿ, ಅದು ಪ್ರೇಮ ಆಗಿ ಮುಂದೆ ಒಂದು ವರ್ಷದೊಳಗೆ ಮದುವೆ ಕೂಡ ಆಗೋದರೊಂದಿಗೆ ಇವನ ಖದರೇ ಬದಲಾಗಿಹೋಯಿತು.

                                                         ಸೋನಿಯಾ ತವರಿನಲ್ಲಿ ಅಂಗಡಿ ಇದೆ..!

                                   ಹಾಗೆ ನೋಡಿದರೆ ಈ ಮನುಷ್ಯ ಕಾರಣವಲ್ಲದ ಕಾರಣಗಳಿಗೆ ಸುದ್ದಿಯಾದದ್ದೇ ಹೆಚ್ಚು. ಮೊದಲ ಕಾರಣ, ರಾಬರ್ಟ್ ವದ್ರಾ ಈ ದೇಶದ ಅತ್ಯಂತ ಪ್ರಭಾವಶಾಲಿ ಕುಟುಂಬದ ಅಳಿಯ ಅನ್ನೋದು. ಅದನ್ನ ಹೊರತು ಪಡಿಸಿದರೆ fitness freak ಅನ್ನೋ ಕಾರಣಕ್ಕೆ, super bikeಗಳ ಖಯಾಲಿ ಇಟ್ಟುಕೊಂಡಿರೋನು ಅನ್ನೋದಕ್ಕೆ ಆವಾಗಾವಾಗ ಪತ್ರಿಕೆಗಳಲ್ಲಿ ಟಿ.ವಿಗಳಲ್ಲಿ ಕಾಣಿಸಿಕೊಳ್ತಿದ್ದ. ಆದರೆ, ಸದ್ದಿಲ್ಲದೇ ತನ್ನದೇ ಒಂದು ಬಿಸಿನೆಸ್ ಸಾಮ್ರಾಜ್ಯ ಸ್ಥಾಪಿಸಿಬಿಟ್ಟಿದ್ದ. ರಾಜಸ್ಥಾನ ಮತ್ತು ಹರಿಯಾಣಗಳಲ್ಲಿ ದೊಡ್ಡ ಮಟ್ಟದ ಭೂಮಿಗೆ ಒಡೆಯನಾಗಿದ್ದ. ರಾಬರ್ಟ್ ವದ್ರಾ ಭೂಮಿ ಖರೀದಿಸಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರಗಳೇ ಇದ್ದುದ್ದನ್ನ ಕೇವಲ ಕಾಕತಾಳೀಯ ಅಂದ್ರೆ ಅನೇಕರು ನಗ್ತಾರೆ. ಈ ಮಧ್ಯೆ ಪಿತರಾರ್ಜಿತವಾಗಿ ಬಂದಿದ್ದ ಕೃತಕ ಆಭರಣಗಳು - ಕರಕುಶಲ ವಸ್ತುಗಳ ವ್ಯವಹಾರವನ್ನು  ಅರ್ಟಿಕ್ಸ್ ಅನ್ನೋ ಬ್ರಾಂಡನಡಿ ದೊಡ್ಡದಾಗಿ ಬೆಳೆಸಿದ ರಾಬರ್ಟ್ ವದ್ರಾ ಇಟಲಿಯಲ್ಲಿ ಮಾರಾಟ ಮಳಿಗೆ ತೆಗೆದ. ಅಲ್ಲಿ, ಭಾರತೀಯ ಮೂಲದ ಪ್ರಾಚ್ಯವಸ್ತುಗಳ ವ್ಯವಹಾರ ನಡೆಯತ್ತೆ. ಸೋನಿಯಾ ಗಾಂಧಿಯವರ ತಂಗಿ ಅನುಷ್ಕಾ ಮಾಯಿನೋ, "ಗಣಪತಿ" ಅನ್ನೋ ಹೆಸರಿನ ತನ್ನ ಮಳಿಗೆಗೆ ಕಳ್ಳದಾರಿಯಲ್ಲಿ ಭಾರತದ ಪ್ರಾಚ್ಯವಸ್ತುಗಳನ್ನ ತರಿಸಿಕೊಂಡು ಅವುಗಳನ್ನ ಲಂಡನ್ನಲ್ಲಿ ಕೋಟ್ಯಂತರ ಬೆಲೆಗೆ ಹರಾಜು ಹಾಕ್ತಾಳೆ ಅಂತ ಇತ್ತೀಚೆಗೆ ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣಿಯನ್ ಸ್ವಾಮಿ ಆರೋಪಿಸಿದ್ದರು. ರಾಬರ್ಟ್ ವದ್ರಾರ export ವ್ಯವಹಾರ ಸೋನಿಯಾ ಗಾಂಧಿಯವರ ಹುಟ್ಟು ದೇಶ ಇಟಲಿಯಲ್ಲಿ ಬೆಳೆದದ್ದು - ಅದೇ ರೀತಿಯ ವ್ಯವಹಾರದಲ್ಲಿ ಸೋನಿಯಾ ಮೇಡಂ ಸಹೋದರಿ ಕೂಡ ಕಾಣಿಸಿಕೊಂಡದ್ದು ಕಾಕತಾಳೀಯ ಅಂದರೂ ಜನ ನಗ್ತಾರೆ. ಇನ್ನು ಯಾವುದೇ ಭದ್ರತಾ ತಪಾಸಣೆ ಇಲ್ಲದೇ ವಿಮಾನ ಪ್ರಯಾಣ ಮಾಡಬಲ್ಲ ವಿ.ವಿ.ಐ.ಪಿಗಳ ಲಿಸ್ಟ್ ನಲ್ಲಿ ರಾಬರ್ಟ್ ವದ್ರಾರ ಹೆಸರನ್ನ ಸೇರಿಸಿ 2005ರ ಸಪ್ಟೆಂಬರ್ 26ರಂದು ಅಧಿಸೂಚನೆ ಹೊರಡಿಸಿತು ಕೇಂದ್ರ ಸರಕಾರ. ನಮ್ಮ ಭೂಸೇನೆ, ವಾಯು ದಳ, ನೌಕಾ ಪಡೆಯ ಮುಖ್ಯಸ್ಥರಿಗೆ ಇಲ್ಲದ ಈ ಸೌಲಭ್ಯವನ್ನ, ಸ್ವತಃ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಗೆ ಇಲ್ಲದ ಈ ಫೆಸಿಲಿಟಿಯನ್ನ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿಲ್ಲದ ರಾಬರ್ಟ್ ವದ್ರಾಗೆ ಕೊಡೋದಕ್ಕೂ ಅವರ ಎಕ್ಸ್ ಪೋರ್ಟ್  ವ್ಯವಹಾರಕ್ಕೂ ಸಂಬಂಧ ಇತ್ತೆಂದು ತುಂಬ ಆರೋಪಗಳು ಕೇಳಿಬಂದವು. ಯಾಕೋ ಏನೋ ಅದು ಹಂಗ್ಹಂಗೇ ಮುಚ್ಚಿಹೋಯಿತು.

                                                   ಕಾಮನ್ವೆಲ್ತು - 2ಜಿ ತರಂಗಾಂತರವು..!

                                   ನಿಜಕ್ಕೂ ಜನ ರಾಬರ್ಟ್ ವದ್ರಾ ಕಡೆ ಹುಬ್ಬೇರಿಸಿ ನೋಡಿದ್ದು ಆತ ಭಾರತದ ಅತಿ ದೊಡ್ಡ ರಿಯಲ್ ಎಸ್ಟೇಟ್ ಕಂಪನಿ D.L.Fನ ಪಾಲುದಾರನಾದಾಗ. ನಂತರ D.L.Fಗೆ ಕಾಮನ್ ವೆಲ್ತ್ ಗೇಮ್ಗಳ ಕಾಮಗಾರಿಯಲ್ಲಿ ಭಾರೀ ಟೆಂಡರ್ ಗಳು ಸಿಕ್ಕವು, ಸುರೇಶ್ ಕಲ್ಮಾಡಿ ಅನೇಕ ನಿಯಮ ಗಾಳಿಗೆ ತೂರಿ ಆ ಕಂಪನಿಗೆ ಉಪಕಾರ ಮಾಡಿದರು. ಡಿ.ಎಲ್.ಎಫ್, ಸೋನಿಯಾ ಅಳಿಯನ ರಾಬರ್ಟ್ ವದ್ರಾ ಒಡೆತನದ ಕಂಪನಿಗಳಿಗೆ ಯಾವುದೇ ಭದ್ರತೆ ಇಲ್ಲದೇ ಕೋಟ್ಯಂತರ ರುಪಾಯಿ ಸಾಲ ಕೊಟ್ಟಿದೆ. ಇವತ್ತಿನ ವ್ಯವಹಾರಿಕ ಜಗತ್ತಿನಲ್ಲಿ ಭದ್ರತೆ ಇಲ್ಲದೇ ಪಡೆಯುವ ಸಾಲವನ್ನ ಲಂಚ ಅಂತಲೇ ಪರಿಗಣಿಸಲಾಗೋದು. ಹಾಗೆ ತಮ್ಮ ಕಲೈಂಜರ್ ಟಿ.ವಿಗೆ ಭದ್ರತೆ ಇಲ್ಲದ ಸಾಲಗಳನ್ನ ಪಡೆದ ಕಾರಣಕ್ಕೇ ಇವತ್ತು ಕನಿಮೋಳಿ ಕಂಬಿ ಎಣೆಸ್ತಿರೋದು. ಆದರೆ, ಕಾಮನ್ವಲ್ತ್ ಗೇಮ್ಸ್ ಹಗರಣದ ತನಿಖೆಗೆ ಮಾತ್ರ ರಾಬರ್ಟ್ ವದ್ರಾ ವ್ಯವಹಾರಗಳು ಒಳಪಡಲೇ ಇಲ್ಲ.
                                  ಯುನಿಟೆಕ್ ಅನ್ನೋ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ರಾಬರ್ಟ್ ವದ್ರಾ ಶೇಕಡಾ 20 ರಷ್ಟು ಶೇರು ಕೊಂಡುಕೊಂಡರು. ನಂತರ ನೋಡಿದರೆ, ಮೊಬೈಲ್ ಕ್ಷೇತ್ರದಲ್ಲಿ ನಯಾಪೈಸೆ ಅನುಭವ ಇಲ್ಲದ ಆ ಕಂಪನಿಗೆ ಕೇವಲ 1658 ಕೋಟಿಗೆ 2ಜಿ ತರಂಗಾಂತರ ಕೊಡಲಾಯಿತು. ಕೆಲವೇ ತಿಂಗಳುಗಳ ನಂತರ ಯುನಿಟೆಕ್ ಕಂಪನಿ ಅದರ ಶೇ 67ರಷ್ಟನ್ನ ನಾರ್ವೆ ಮೂಲದ ಟೆಲಿನಾರ್ ಗೆ  ಮಾರಿದ್ದು ಅನಾಮತ್ತು 6,135 ಕೋಟಿಗೆ. ಟೆಲಿನಾರ್ ಕಂಪನಿಗೆ ಪಾಕಿಸ್ತಾನದಲ್ಲಿ ಸಂಶಯಾಸ್ಪದ ವ್ಯವಹಾರಗಳಿವೆ, ಅದು ಭಾರತಕ್ಕೆ ಪ್ರವೇಶಿಸುವುದರಿಂದ ರಾಷ್ಟ್ರದ ಭದ್ರತೆಗೆ ಧಕ್ಕೆ ಆಗಬಹುದು ಅಂತ ಗೃಹ ಇಲಾಖೆ ಹೇಳಿದರೂ ಸಹ ಆ ವ್ಯವಹಾರ ಸರಳವಾಗಿ ಮುಗಿದು ಹೋಯಿತು. ಈಗ 2ಜಿ ಹಗರಣದ ತನಿಖೆಯಲ್ಲಿ ಆ ವಿಷಯದ ಪ್ರಸ್ತಾಪವೇ ಇಲ್ಲ.

                                                         ಮನೆಅಳಿಯನ ಕಂಪನಿಗಳೆಷ್ಟು..?

                                  ರಾಬರ್ಟ್ ತನ್ನ ತಾಯಿಯನ್ನೇ ಪಾಲುದಾರಳನ್ನಾಗಿಸಿಕೊಂಡು ಆರಂಭಿಸಿದ ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೆಟ್ ಲಿಮಿಟೆಡ್ ಗೆ  ದಕ್ಷಿಣ ದೆಹಲಿಯ "ಹಿಲ್ಟನ್ ಗಾರ್ಡನ್ ಇನ್" ಪಂಚತಾರಾ ಹೊಟೆಲ್ ನಲ್ಲಿ ಪಾಲುದಾರಿಕೆ ಇದೆ. ಬ್ಲೂ ಬ್ರೀಜ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಅನ್ನೋ ಹೆಸರಿನಲ್ಲಿ ಖಾಸಗಿ ವಿಮಾನಗಳನ್ನ ಬಾಡಿಗೆಗೆ ಕೊಡುವ ವ್ಯವಹಾರ ಶುರುಮಾಡಿದ್ದಾರೆ ರಾಬರ್ಟ್. ಜೊತೆಗೆ ತಮ್ಮ ಓಡಾಡಕ್ಕೆ ಎರಡು ಪ್ರತ್ಯೇಕ ವಿಮಾನಗಳನ್ನಿಟ್ಟುಕೊಂಡಿದ್ದಾರೆ. ಇನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ನಾತ್ ಇಂಡಿಯಾ ಐ.ಟಿ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್, ರಿಯಲ್ ಅರ್ಥ್ ಎಸ್ಟೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸ್ಕೈ ಲೈಟ್ ರಿಲಾಲಿಟಿ ಪ್ರೈವೇಟ್ ಲಿಮಿಟೆಡ್ ಅನ್ನೋ ಕಂಪನಿಗಳನ್ನಿಟ್ಟುಕೊಂಡಿದಾರೆ. ಹತ್ತು ವರ್ಷಗಳಲ್ಲಿ ಸಾವಿರ ಕೋಟಿಯ ಸರದಾರನಾಗದೇ ಇನ್ನೇನು..?

                                                                ಸಾಲು ಸಾಲು ಸಾವುಗಳು..!

                                  ಸೋನಿಯಾ ಗಾಂಧಿ ಅಳಿಯ ರಾತ್ರೋರಾತ್ರಿ ಕೋಟ್ಯಾಧೀಶನಾದ ವಿಷಯವೊಂದೇ ಅಲ್ಲ, ಆತನ ಮನೆಯಲ್ಲಾದ ಸಾವುಗಳು ಕೂಡ ಸಂಶಯಗಳನ್ನ ಹುಟ್ಟುಹಾಕ್ತವೆ. ರಾಬರ್ಟ್ ತಂದೆಗೆ ತಮ್ಮ ಮಗ ಪ್ರಿಯಾಂಕಾ ಗಾಂಧಿಯನ್ನ ಮದುವೆಯಾಗೋದು ಮೊದಲಿನಿಂದಲೂ ಇಷ್ಟ ಇರಲಿಲ್ಲ. ನಂತರ ಕೂಡ ಆ ಮನಸ್ತಾಪ ಹಾಗೆಯೇ ಉಳಿದು ಆ ಮನೆಯೇ ಒಡೆದು ಹೋಯಿತು. ರಾಬರ್ಟ್ ಜೊತೆಗೆ ಆತನ ತಾಯಿ ಮೌರೀನ್ ವಾದ್ರಾ ಬಂದರೆ, ತಂದೆ ರಾಜಿಂದರ್ ವಾದ್ರಾ, ಸಹೋದರ ರಿಚರಡ್  ವದ್ರಾ, ಸಹೋದರಿ ಮಿಷೆಲ್ ಪ್ರತ್ಯೇಕವಾಗಿ ಉಳಿದರು. ಮಿಷೆಲ್ 2001ರ ಎಪ್ರೀಲ್ ನಲ್ಲಿ ರಸ್ತೆ ಅಪಘಾತವೊಂದರಲ್ಲಿ ಮರಣ ಹೊಂದಿದಳು. ನಂತರ ರಾಬರ್ಟ್, "ತನ್ನ ತಂದೆ ಮತ್ತು ತಮ್ಮ ತನ್ನ ಹೆಸರನ್ನ ದುರುಪಯೋಗಪಡಿಸಿಕೊಂಡು ಹಣ ಪಡೆಯುತ್ತಿದ್ದಾರೆ, ಅವರಿಗ್ಯಾರೂ ಹಣ ಕೊಡಬೇಡಿ" ಅಂತ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಅದಕ್ಕೆ ಉತ್ತರವಾಗಿ ಅವನು ನನ್ನ ಮಗನೇ ಅಲ್ಲ ಅಂತ ರಾಜಿಂದರ್ ವದ್ರಾ ಪತ್ರಿಕಾ ಹೇಳಿಕೆ ನೀಡಿದರು. ಇದಾದ ಮೇಲೆ ರಾಬರ್ಟ್ ಸಹೋದರ ರಿಚರಡ್ ಸಪ್ಟೆಂಬರ್ 2003ರಲ್ಲಿ ಮುರಾದಾಬಾದ್ ನ ವಸಂತ್ ವಿಹಾರ್ ಪ್ರದೇಶದ ತನ್ನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸತ್ತು ಹೋದ. ಪೊಲೀಸರು ಅದನ್ನ ಹಾರ್ಟ್ ಅಟ್ಯಾಕ್ ಅಂದರು. ಆನಂತರ ಕೂಡ ಸೋನಿಯಾ ಗಾಂಧಿ ಅಳಿಯ ತನ್ನ ತಂದೆಯ ಜೊತೆಗಿನ ಸಂಬಂಧ ಸುಧಾರಿಸಿಕೊಳ್ಳಲಿಲ್ಲ. 2009ರ ಎಪ್ರೀಲ್ 3 ನೇ ತಾರೀಖಿನ ದಿನ ರಾಜಿಂದರ್ ವಾದ್ರಾ ಶವ ದೆಹಲಿಯ  ಯೂಸೂಫ್ ಸರಾಯ್ ಪ್ರದೇಶದ ಸಿಟಿ ಇನ್ ಹೊಟೇಲ್ ನ ರೂಮೊಂದರಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಿಕ್ಕಿತ್ತು. ರಾಬರ್ಟ್ ನ ತಂಗಿ, ತಮ್ಮ ಮತ್ತು ತಂದೆಯ ಈ ಅನುಮಾನಾಸ್ಪದ ಸಾವುಗಳ ಬಗ್ಗೆ ಯಾರೂ ಪ್ರಶ್ನೆ ಎತ್ತಲಿಲ್ಲ.

                                                            ಫಾರಿನ್ ಗೆ ಹೋದದ್ದೆಷ್ಟು ಸಲ..?

                                 ರಾಬರ್ಟ್ ವದ್ರಾ ಒಬ್ಬರೇ ಏನು, ಗಾಂಧಿ ಕುಟುಂಬದ ಸದಸ್ಯರ ಬಗ್ಗೆ ಪ್ರಶ್ನೆ ಕೇಳೋದೇ ತಪ್ಪು ಅನ್ನೋ ಹಾಗಾಗಿದೆ. ಇತೀಚೆಗೆ ರಾಜಸ್ಥಾನದ ಕೈಲಾಶ್ ಕನ್ವರ್ ಅನ್ನೋರು ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷೆ ಸೋನಿಯಾ ಗಾಂಧಿ ಕಳೆದ ಎರಡು ವರ್ಷಗಳಲ್ಲಿ  ಯಾವಾಗ್ಯಾವಾಗ - ಯಾವ ಕಾರಣಕ್ಕೆ ವಿದೇಶಕ್ಕೆ ಹೋಗಿದಾರೆ ಅನ್ನೋ ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯಡಿ ವಿದೇಶಾಂಗ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನ ವಿದೇಶಾಂಗ ಇಲಾಖೆ ಸಾಗಹಾಕಿದ್ದು ಸಂಸದೀಯ ವ್ಯವಹಾರಗಳ ಇಲಾಖೆಗೆ. ಅಲ್ಲಿನವರು ಆ ಅರ್ಜಿಯನ್ನ ಅಂಕಿಸಂಖ್ಯೆ ಮತ್ತು ಕಾರ್ಯಕ್ರಮ ಜಾರಿ ಇಲಾಖೆಗೆ ಕೊಟ್ಟು ಕೈ ತೊಳೆದುಕೊಂಡರು. ಅಂಕಿಸಂಖ್ಯೆ ಇಲಾಖೆಯವರು ಅದನ್ನು ನೇರವಾಗಿ ರಾಷ್ಟ್ರೀಯ ಸಲಹಾ ಸಮಿತಿಗೇ ಕಳಿಸಿದರು. ರಾಷ್ಟ್ರೀಯ ಸಲಹಾ ಸಮಿತಿಯವರು ಆ ಆರ್.ಟಿ.ಐ ಅರ್ಜಿಯನ್ನು ಕಳಿಸಿದ್ದು ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ. ಕೊನೆಗೆ ಕೈಲಾಶ್ ಕನ್ವರ್ ಗೆ ಪ್ರಧಾನಿ ಕಾರ್ಯಾಲಯದಿಂದ ಬಂದ ಒಂದು ಸಾಲಿನ ಉತ್ತರ "ಸೋನಿಯಾ ಗಾಂಧಿಯವರ ವಿದೇಶ ಪ್ರವಾಸಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ" ಅನ್ನೋದು. ಕೇಂದ್ರ ಸರಕಾರದ ಲಗಾಮು ಹಿಡಿದು ಕುಳಿತ ಹೆಣ್ಣುಮಗಳು ಕದ್ದು - ಮುಚ್ಚಿ ಫಾರಿನ್ ಟೂರ್ ಗಳನ್ನ ಮಾಡ್ತಿರೋದ್ಯಾಕೆ ಅನ್ನೋದು ಅರ್ಥ ಆಗ್ತಿಲ್ಲ.
                                 ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಅತ್ಯಂತ ಪ್ರಭಾವಶಾಲಿ ಕುಟುಂಬದ ಮನೆ ಅಳಿಯ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಧಿಕಾರ ಜನರಿಗೆ ಇದೆ. ಇತ್ತೀಚೆಗೆ "ನಿಮ್ಮೆಲ್ಲಾ ವ್ಯವಹಾರಗಳನ್ನ ನಾವು ಗಮನಿಸುತ್ತಿದ್ದೇವೆ" ಅಂತ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟು ಮಾಧ್ಯಮಗಳಲ್ಲಿ ಒಂದು ಜಾಹೀರಾತು ಕೊಟ್ಟಿತ್ತು. ನಮ್ಮದು ಬೇಕಿದ್ರೆ ಗಮನಿಸಿಕೊಂಡು ಏನಾದ್ರೂ ಮಾಡಿ, ರಾಬರ್ಟ್ ವದ್ರಾನ ವ್ಯವಹಾರಗಳನ್ನ ಗಮನಿಸೋದು ಯಾವಾಗ ಅನ್ನೋದು ಈಗಿನ ಪ್ರಶ್ನೆ.

Thursday, July 28, 2011

ತಾವೇ ತೋಡಿಕೊಂಡ ಗುಂಡಿಯಲ್ಲಿ ಅಸಹಾಯಕ ಯಡಿಯೂರಪ್ಪ..!

                               "ನಿಮ್ಮ ಫೈಲ್ ನೋಡಿದೆ, ಸೈನ್ ಮಾಡಿಟ್ಟಿರ್ತೀನಿ, ತಗೊಂಡ್ಹೋಗಿ" ಅಂದರು. ನನಗೆ ಒಂದು ಕ್ಷಣ ಏನೂ ಅರ್ಥ ಆಗಲಿಲ್ಲ. "ಯಾವ್ ಫೈಲು ಸಾರ್" ಅಂದೆ. "ಅದೇ, ಕೆ.ಆರ್ ಮಾರ್ಕೆಟ್ ಶಿಫ್ಟ್ ಮಾಡೋದು, ಗುಡ್ ಪ್ರಾಜೆಕ್ಟ್, ಸೈನ್ ಮಾಡಿಟ್ಟಿರ್ತೀನಿ ತಗೊಂಡ್ಹೋಗಿ" ಮತ್ತೆ ಅದೇ ಮಾತು. ನನಗೆ ಮತ್ತೆ ಕನ್ ಫ್ಯೂಷನ್ನು.  ಏನೊಂದೂ ತಿಳಿಯದೇ ಅವರ ಮುಖಾನೇ ನೋಡಿದೆ. ಅಷ್ಟರಲ್ಲಿ ಪಕ್ಕದಲ್ಲಿ ನಿಂತಿದ್ದ ಆಫೀಸರ್ ಒಬ್ರು ಅವರ ಕಿವೀಲಿ ಅದೇನೋ ಹೇಳಿದರು. ಕಿವಿ ಗಮನಿಸಿದೆ, ಮಷಿನ್ ಇಲ್ಲ. ಅದಿಲ್ಲದಿದ್ದರೆ ಆ ವಯ್ಯನಿಗೆ ಕೇಳಿಸೋದಿಲ್ಲ, ಕೂಗಿ ಹೇಳಬೇಕು. ಕೂಗಿ ಹೇಳೋದಕ್ಕೆ ಆ ಅಧಿಕಾರಿಗೆ ಮಜುಗರ, ಎರಡು ಮಾರು ದೂರದಲ್ಲಿ ಕುಳಿತಿದ್ದ ನನಗೆ ಕೇಳುವಷ್ಟು ಗಟ್ಟಿಯಾಗಿ ಪಿಸುಗುಟ್ಟಿದರು. ಅದನ್ನ ಕೇಳಿಸಿಕೊಂಡ ಆತ, "ಓಹೋ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ನೀವಲ್ಲವಾ..?" ಅಂದುಬಿಟ್ಟ. "ಅಲ್ಲ ಸಾರ್ ನಾನು ನರೇಂದ್ರಸ್ವಾಮಿ ಅಂತ, ಮಳವಳ್ಳಿ ಎಂ.ಎಲ್.ಎ, ಸೋಷಿಯಲ್ ವೆಲ್ಫೇರ್ ಮಿನಿಸ್ಟ್ರು" ಅಂತ ಹೇಳಿದವನೇ ಫೈಲ್ ಎತ್ತುಕೊಂಡು ಎದ್ದುಬಂದುಬಿಟ್ಟೆ ಸಾರ್, ನಂಗೆ ತುಂಬ ಅವಮಾನ ಆಗಿತ್ತು ಅಂದವರೇ ಎದುರಿಗಿದ್ದ ಗ್ಲಾಸ್ ಕೈಗೆತ್ತಿಕೊಂಡು ಒಂದು ಗುಟುಕು ಕುಡಿದರು. ಅವರ ಕಣ್ಣಲ್ಲಿ ನೀರಿದ್ದದ್ದು ಸ್ಪಷ್ಟವಾಗಿ ಕಾಣಿಸಿತ್ತು.
ನರೇಂದ್ರ ಸ್ವಾಮಿ

                 ಹಾಗೆ ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಹಿತ್ತಲಲ್ಲಿ ಲಾನ್ ಮೇಲೆ ಹಾಕಲಾಗಿದ್ದ ಟೇಬಲ್ ಎದುರು ಕುಳಿತು ಮಾತಾಡ್ತಿದ್ದವರು ಸಮಾಜಕಲ್ಯಾಣ ಸಚಿವ ನರೇಂದ್ರಸ್ವಾಮಿ. ಅಷ್ಟೊತ್ತಿಗಾಗಲೇ ಅವರ ಮಂತ್ರಿಗಿರಿ ಹೊರಟುಹೋಗಿ ಶಾಸಕ ಸ್ಥಾನ ಕೂಡ ಅಪಾಯದಲ್ಲಿತ್ತು. ಬಂಡಾಯ ಎದ್ದು ಗೋವಾಕ್ಕೆ ಹೋಗಿದ್ದ ಹದಿನೆಂಟು ಜನರ ಪೈಕಿ ಅವರೂ ಒಬ್ಬರು. ಸರ್ಕಾರ ಕೆಡವಬೇಕು ಅನ್ನೋ ಹಟಕ್ಕೆ ಬಿದ್ದಿದ್ದ ಅವರನ್ನ ಎಚ್.ಡಿ ಕುಮಾರಸ್ವಾಮಿ ಕರಕೊಂಡು ಬಂದಿದ್ದರು. ಅವರದೊಂದು ಇಂಟರ್ವ್ಯೂ ಮಾಡಬೇಕು ಅಂತ ಹಮೀದ್ ಪಾಳ್ಯ ಮತ್ತು ನಾನು ಆವತ್ತು ಸಂಜೆ ಹೋಗಿದ್ವಿ. ಇಂಟರ್ವ್ಯೂ ಮುಗಿಸಿ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡ್ತಾ ಕುಳಿತಿದ್ದಾಗ, "ನಿಮಗೇನ್ ಕಡಿಮೆ ಆಗಿತ್ತು ಸಾರ್, ಮೊದಲ ಸಲ ಎಂ.ಎಲ್.ಎ ಆದಾಗಲೇ ಕ್ಯಾಬಿನೆಟ್ ಮಂತ್ರಿಗಿರಿ ಸಿಕ್ಕಿತ್ತು, ಗೂಟದ ಕಾರು, ಎಸ್ಕಾರ್ಟ್ ಗೆ ಪೊಲೀಸರು, ಸರಕಾರಿ ಬಂಗಲೆ, ಇಷ್ಟೆಲ್ಲಾ ಇದ್ರೂ ಯಾಕೆ ಬಂಡಾಯ ಎದ್ರಿ..?" ಅಂತ ಕೇಳಿದಾಗ ಅದೊಂದು ಇನ್ಸಿಡೆಂಟ್ ಹೇಳಿದರು ನರೇಂದ್ರಸ್ವಾಮಿ. ಸಂಪುಟ ರಚಿಸಿ ಒಂದೂವರೆ ವರ್ಷವಾಗಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾರುಕಟ್ಟೆ ಸಚಿವ ಶಿವರಾಜ್ ತಂಗಡಗಿ ಯಾರು - ಸಮಾಜ ಕಲ್ಯಾಣ ಸಚಿವ ನರೇಂದ್ರಸ್ವಾಮಿ ಯಾರು ಅನ್ನೋ ಕನ್ಫ್ಯೂಷನ್ನಿತ್ತು.
ಶಿವರಾಜ್ ತಂಗಡಗ

                of course, ಇದೊಂದೇ ಕಾರಣಕ್ಕೆ ಬಂಡಾಯವಾಗಿರಲಿಲ್ಲ. ಆವತ್ತು ಮೂರು ತಾಸು ಮಾತಾಡ್ತಾ ಕುಳಿತಿದ್ದ ನರೇಂದ್ರಸ್ವಾಮಿ ತುಂಬ ವಿಷಯ ಹೇಳಿದರು. ಕ್ಷೇತ್ರದ ಸಣ್ಣಪುಟ್ಟ ಕೆಲಸ ಮಾಡಿಸಿಕೊಳ್ಳೋದಕ್ಕೂ ಆಗ್ತಿದ್ದ ಕಷ್ಟಗಳು, ಸಿ.ಎಂ ಆಪ್ತ ಸಚಿವರ ಕಿರಿಕಿರಿಗಳು, ಟೆಂಡರ್ ವಿಷಯಗಳಲ್ಲಿ ಯಡಿಯೂರಪ್ಪನವರ ಕುಟುಂಬದವರ ಹಸ್ತಕ್ಷೇಪಗಳು, ಸಂಪುಟ ಸಭೆ ಕರೆದರೆ ಅಲ್ಲಿ ಪಕ್ಷೇತರರನ್ನ ನಡೆಸಿಕೊಳ್ತಿದ್ದ ರೀತಿ, ಆವಾಗಾವಾಗ ಆಗ್ತಿದ್ದ ಅವಮಾನಗಳು, ಹೀಗೆ. ಒಂದು ಸಲ ಅದ್ಯಾಕೋ ಅಟಲ್ ಬಿಹಾರಿ ವಾಜಪೇಯಿ ನೆನಪಾದರು. ಹದಿಮೂರು ಪಕ್ಷ ಕಟ್ಟಿಕೊಂಡು ಹೆಣಗಿದ ಆ ತಾತಯ್ಯ ಅದೆಷ್ಟು ಯಶಸ್ವಿಯಾಗಿ ಸರಕಾರ ತೂಗಿಸಿಕೊಂಡು ಹೋದರಲ್ಲ, ಆರು ಜನ ಪಕ್ಷೇತರ ಶಾಸಕರನ್ನ ಸಂಭಾಳಿಸೋದಕ್ಕಾಗಲಿಲ್ಲವಾ ಯಡಿಯೂರಪ್ಪನಿಗೆ ಅಂತ.
                Human resource management ಅನ್ನೋದು ಬರಿ corporate sectorಗೆ ಮಾತ್ರ ಅಂದವರಾರು..? ಅದು ರಾಜಕೀಯಕ್ಕೂ apply ಆಗತ್ತೆ, ಆಗಬೇಕು. ಅದೊಂದು ಯಡಿಯೂರಪ್ಪನವರಿಗೆ ಸರಿಯಾಗಿ ಬಂದುಬಿಟ್ಟಿದ್ದರೆ, ಮೂರು ವರ್ಷಗಳಲ್ಲಿ ಬಂದ ಮುಕ್ಕಾಲು ಭಾಗ ಸಮಸ್ಯೆಗಳು ಬರ್ತಾನೇ ಇರಲಿಲ್ಲ. (ರಣ ಹಸಿವು ಮತ್ತು ಮಕ್ಕಳ ಬಗೆಗಿನ ಧೃತರಾಷ್ಟ್ರ ಪ್ರೇಮ ಇರದೇ ಹೋಗಿದ್ದರೆ ಉಳಿದ ಕಾಲು ಭಾಗ ಸಮಸ್ಯೆಗಳೂ ಇರ್ತಿರಲಿಲ್ಲ..!) ಇದೆಲ್ಲ ನಮಗೆ - ನಿಮಗೆ ಸಿಲ್ಲಿ ವಿಷಯ ಅನ್ನಿಸಬಹುದು. ಆದ್ರೆ, ಒಬ್ಬ ಶಾಸಕನಿಗೆ, ಅದರಲ್ಲೂ ಕ್ಯಾಬಿನೆಟ್ ದರ್ಜೆ ಮಂತ್ರಿಗಲ್ಲ. ಅವರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋದರೆ ಮತದಾರರು ಹೆಗಲ ಮೇಲೆ ಹೊತ್ತುಕೊಂಡು ಕುಣೀತಾರೆ. ಅದೇ ಬೆಂಗಳೂರಿಗೆ ಬಂದು ಯಡಿಯೂರಪ್ಪನವರ ಎದುರಿಗೆ ನಿಂತರೆ "ನಿಮ್ಮ ಹೆಸರೇನು..?" ಅಂದುಬಿಡೋರು.
                ರಾಜಕಾರಣಿ ಬೇಸಿಕಲಿ ಒಬ್ಬ egoistic ಮನುಷ್ಯ. ಹೆಜ್ಜೆ - ಹೆಜ್ಜೆಗೂ, ಘಳಿಗೆ ಘಳಿಗೆಗೂ ಆತನ ego satisfy ಆಗ್ತಿರಬೇಕು. ಆತ ಎಲೆಕ್ಷನ್ ಗೆಲ್ಲೋದು ಕೂಡ ಆ ego satisfactionನ ಒಂದು ಭಾಗವೇ. ತಾನು ಆಡಳಿತ ಪಕ್ಷದವನು, ತನ್ನೊಬ್ಬನ ಬೆಂಬಲ ಕೂಡ ಈ ಸರಕಾರ ಭದ್ರವಾಗಿರೋದಕ್ಕೆ ಕಾರಣ ಅನ್ನೋ ಯೋಚನೆ ಕೂಡ ಅವನ ego ತಣ್ಣಗಾಗಿಸತ್ತೆ. ಅದು ಯಡಿಯೂರಪ್ಪನವರಿಗೆ ಗೊತ್ತೇ ಇರಲಿಲ್ಲ ಅಂತ ಅನ್ನಿಸೋದು ಭಿನ್ನಮತೀಯ ಶಾಸಕರನ್ನ ಮಾತಾಡಿಸಿದಾಗ. "ಸಹಿ ಮಾಡಿ ಅಂತ ಯಾವ್ದೋ ಫೈಲ್ ತಗೊಂಡು ಹೋದ್ರೆ ಪ್ಲಾಸ್ಟಿಕ್ ಚೇರ್ ಎತ್ತಿ ಹೊಡೆಯೋದಕ್ಕೆ ಬಂದುಬಿಟ್ರು" ಅಂತ ಇನ್ನೊಬ್ಬ ಶಾಸಕರು ಹೇಳಿದರು. "ಮನಸಿಗೆ ತುಂಬ ಬೇಜಾರಾಗಿ ಎಸ್ಕಾರ್ಟ್ ಜೀಪು, ಬೆಂಗಾವಲಿನ ಪೊಲೀಸರನ್ನ ಬಿಟ್ಟು ಒಬ್ಬನೇ ಹೋಗಿ ನನ್ನ ಮನೆದೇವರ ದೇವಸ್ಥಾನದ ಗರ್ಭ ಗುಡಿಯಲ್ಲಿ ಬಾಗಿಲು ಹಾಕಿಕೊಂಡು ಕುಂತು ಸಾಕು ಸಾಕಾಗೋ ತನಕ ಅತ್ತುಬಿಟ್ಟೆ" ಅಂತ ಹೇಳಿದವರು ಒಬ್ಬ ಸಚಿವ. ಅಂಥವರೆಲ್ಲ ಸೇರಿಕೊಂಡು ಯಡಿಯೂರಪ್ಪನಿಗೆ ಮರೆಯಲಾಗದ ಪಾಠ ಕಲಿಸ್ತೀವಿ ಅಂತ ಹೊರಟಾಗ ನಡೆದದ್ದೇ ಗೋವಾ ಬಂಡಾಯ.
                ಪರಿಸ್ಥಿತಿ ಎಲ್ಲಿಗೆ ಬಂದಿತ್ತೆಂದರೆ, ವಿರೋಧ ಪಕ್ಷದಲ್ಲಿ ಒತ್ತಟ್ಟಿಗಿರಲಿ, ಆಡಳಿತ ಪಕ್ಷದಲ್ಲೇ ಯಡಿಯೂರಪ್ಪನವರ ಸಿಟ್ಟಿನ ಬಗ್ಗೆ ಕಥೆಗಳು ಹುಟ್ಟಿಕೊಂಡುಬಿಟ್ಟಿದ್ದವು. ಯಾರೇ ಹೋದರೂ "ಸಾಹೇಬರ ಮೂಡ್ ಹೆಂಗಿದೆ" ಅಂತ ಮೊದಲೇ ಕೇಳೋರು. ಅದೊಂದು ಸಲ "ಇನ್ನು ಮುಂದೆ ನಾನು ಬದಲಾಗ್ತೀನಿ" ಅಂತ ಅಷ್ಟೂ ಚಾನೆಲ್ಲುಗಳ ಎದುರು ಮಾತಾಡಿದರಲ್ಲ, ಆವತ್ತೇ ಮನೆಗೆ ಹೋಗಿ ಗನ್ ಮ್ಯಾನ್ ಒಬ್ಬನ ಮೇಲೆ ಪೇಪರ್ ವೇಟ್ ಎಸೆದರಂತೆ. ಇದು ಯಡಿಯೂರಪ್ಪನವರ ಪತನಕ್ಕೆ ಕಾರಣವಾದ ಹಲವು ವಿಷಯಗಳಲ್ಲಿ ಒಂದು ಮಾತ್ರ. ಹೇಳ್ತಾ ಹೋದ್ರೆ ದೊಡ್ಡ ಪಟ್ಟಿ ಆಗತ್ತೆ. ಅದೊಂದು ಸಲ, ಇದೆಲ್ಲವನ್ನೂ ಸೇರಿಸಿ ಒಂದು ಪುಸ್ತಕ ಯಾಕೆ ಮಾಡಬಾರದು ಅಂತ ಯೋಚಿಸಿದ್ದೂ ಆಗಿತ್ತು. ಆದರೆ, ಆ ಯೋಚನೆಗೆ ದಿನ ತುಂಬೋ ಮೊದಲೇ ಗರ್ಭಪಾತವಾಗಿದ್ದು ಬೇರೆ ಮಾತು.
               ಇವತ್ತು, ಅವರ ರಾಜೀನಾಮೆ ಪ್ರಹಸನದ ಪ್ರತಿ ಬೆಳವಣಿಗೆಯನ್ನೂ ನೋಡ್ತಿದ್ದವನಿಗೆ ಇದೆಲ್ಲ ನೆನಪಾಯಿತು. ದಕ್ಷಿಣ ಭಾರತದಲ್ಲಿ ಮೊಟ್ಟಮೊದಲ ಸಲ ಬಿ.ಜೆ.ಪಿಯನ್ನ ಅಧಿಕಾರಕ್ಕೆ ತಂದ ಯಡಿಯೂರಪ್ಪನವರು ಹೇಗೆ ಮೂರು ವರ್ಷಗಳ ಕಾಲ ತಮ್ಮ ಗುಂಡಿಯನ್ನ ತಾವೇ ತೋಡಿಕೊಂಡರಲ್ಲ ಅಂತ ಯೋಚಿಸಿದರೆ ಆಶ್ಚರ್ಯ ಆಗತ್ತೆ. ಇವತ್ತು ಆ ಗುಂಡಿಯಲ್ಲಿ ಅವರೇ ಬಿದ್ದಿದಾರೆ. ಉಳಿದವರು ಮೇಲಿನಿಂದ ಮಣ್ಣು ಸುರಿಯದಿದ್ದರೆ ಅದು ಯಡಿಯೂರಪ್ಪನವರ ಪೂರ್ವ ಜನ್ಮದ ಪೂಜಾ ಫಲ